ಗೀರ್ವಾಣಿ
ಒಬ್ಬಳೇ ಹೊರಟು ಬಿಡುವ ಇರಾದೆಯೇನೂ ನನಗಿರಲಿಲ್ಲ.
ಆತ್ಮ ಸಾಂಗತ್ಯ ಬೇಕಿತ್ತು ನನಗೆ.
ಅಂತರ್ಯಾತ್ರೆಗೆ ನಿನ್ನನ್ನೂ ಸೇರಿಸಿಕೊಂಡೆ.
ಅದ್ಯಾವಾಗ ಕೈ ತಪ್ಪಿ ನಡೆದೆಯೋ ಗೊತ್ತೇ ಆಗಲಿಲ್ಲ !
ಕುರುಹುಗಳನ್ನಾದರೂ ಬಿಡಬಾರದಿತ್ತೇ?
ಮತ್ತದೇ ತಿರುವುಗಳ ಬಳಿ ಹೋಗಿ ಹುಡುಕುತ್ತೇನೆ.
ವಾಸನೆಗಳೊಂದಿಗೆ ಜೋಡಿಸಿಕೊಳ್ಳುತ್ತೇನೆ.
ಆತ್ಮಕ್ಯಾಕೋ ಜನ್ಮಾಂತರದ ಮರೆವು!!
ಏನನ್ನೂ ಗ್ರಹಿಸುತ್ತಿಲ್ಲ.
ಈಗ್ಯಾಕೋ ವ್ಯೋಮಗಳಾಚೆಗಿನ ಸೆಳೆತ.
ಬೆಳಕಿನ ಜಾಡು ಹಿಡಿದು ಹೊರಟಿದ್ದೇನೆ.
ನೀ ಮರಳಿ ಬಂದರೆ ವಿಳಾಸ ಬದಲಾಗಿರುತ್ತದೆ.
ಕ್ಷಮಿಸು.





0 Comments