ಲಕ್ಷ್ಮಣ ವಿ ಎ ಕವಿತೆ- ಬುದ್ಧಿ ಹೇಳುವುದು ಹೇಗೆ ?

ಡಾ ಲಕ್ಷ್ಮಣ ವಿ ಎ 

ಹರೆಯದ ಹುಡುಗಿಯ
ಎಡಗಾಲಿನ ಹೈ ಹೀಲ್ಡಿನ
ಹವಾಯಿಯೊಂದನ್ನು
ದಡಕ್ಕೆ ತಂದೆಸಿದಿದೆ ಅರಬ್ಬೀ ಕಡಲು

ಹೇಳಿ ಕೇಳಿ
ಹುಣ್ಣಿಮೆಯ ಇರುಳು
ಹುಚ್ಚೆದ್ದು ಕುಣಿವ ಅಲೆಗಳು
ರೇತಿನಲಿ ಅಂಗಾತ ಬಿದ್ದು
ಎದೆಯೊಡೆದು ರೋದಿಸುವಂತೆ
ಜೋರು ಗಾಳಿಗೆ ಸಣ್ಣಗೆ ಕಂಪಿಸುವಂತೆ
ಕಾಣುವ ಒಂಟಿ ಹೈ ಹೀಲ್ಡು

ಬದುಕಿ ಬಿಡುತ್ತೇನೆ ದಮ್ಮಯ್ಯ,
ಅವಳು ಬಿಟ್ಟು ಎಸೆದರೂ ಆ ಇನ್ನೊಂದರ
ಜೊತೆಗೆ ಹೀಗೋ ಹಾಗೋ ಹೊಂದಿಕೊಂಡು

ಆಕಾಶವಾಣಿಯ ಇಂದಿನ
ಹವಾಮಾನ ವರದಿ ಕಡಲಿಗಿಳಿಯದಂತೆ
ಎಚ್ಚರಿಸಿದೆ ಬೆಸ್ತರನು
ಬಡ ಒಡಲುಗಳ ಒಲೆಯ
ಮೇಲೆ ಎಡೆಬಿಡದ ಸುರಿಯುವ ಆಷಾಢದ ಮಳೆ
ಬಲೆಯಿಲ್ಲ ಬೆಸ್ತನಿಲ್ಲ ದೋಣಿಯಿಲ್ಲ
ಸುರಿವ ಮಳೆಗೆ ಕರುಣೆಯಿಲ್ಲ –
ಮೀನು ಸಾರಿಗೆ ಮೂಗರಳಿಸಿ ಕುಂತ
ಪೇಟೆಯ ಬೀದಿ

ಅಗೋ
ಅಲ್ಲೊಂದು – ಕೆಂಪು ದಾವಣಿ
ತೇಲುತ್ತ
ದೂರದ ಕಡಲನೀಲಿಯಲಿ
ಇನ್ನಷ್ಟೇ ನಂದಿ ಹೋಗುವ
ದೀಪದಂತೆ

ಕೊನೆಯ ಬಾರಿಗೆ
ಕೊನೆಯ ತಿರುವಿನಲಿ ತಿರುಗಿ
ನಿಂತು ನೋಡಿದ ಕಡಲು ಕಣ್ಣುಗಳು
ತೀರದ ಬಂಡೆಗೆ ಬಡಿಯುವ
ಅಲೆಯ ಸದ್ದಿನ ಎದೆಯ ಬಡಿತಗಳು

ಕಣ್ಣು ಮುಚ್ಚಿ
ಅವಳ ಚಿತ್ರ ಕಳಚಬಹುದು ಹೇಗೊ
ಎದೆಯ ಬಡಿತಗಳಿಗೆ
ಬುದ್ದಿ ಹೇಳಲಿ ಹೇಗೆ ?

‍ಲೇಖಕರು Admin

November 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: