ಲಕ್ಷ್ಮಣ್ ಕೆ ಪಿ ಕವಿತೆ: ರೋಹಿತನ ನೆನಪಿಗೆ…

ಲಕ್ಷ್ಮಣ್ ಕೆ ಪಿ

**

ಪತ್ರ ಓದಿದೆ; ಮತ್ತೆ,
ಅವನು ಮೊದಲ ಬಾರಿಗೆ ಬರೆದ
ಕೊನೆಯ ಪತ್ರ
ಜೀವ ತೆಗೆದುಕೊಳ್ಳುವ ಗಳಿಗೆಗಳಿಗೂ ಕೆಲಗಳಿಗೆ ಮೊದಲು

ಹುಟ್ಟು ಸಾವುಗಳು ಕೊನೆ ಮೊದಲುಗಳಲ್ಲ
ಹರಿವ ಜೀವ ನಿರಂತರ ತೊರೆ

ಬಿದ್ದ ದೇಹ
ಗೊಬ್ಬರವಾಗಬಹುದು
ಭೂಮಿ ಕೆಳಗೆ
ಬೇರಿನೊಳಗೆ
ಹರಿದು ಹೂವಾಗಬಹುದು ಕಂಡವರ ಕಣ್ಣಿಗೆ
ನಗು, ಕಣ್ಣೀರು,ಮೌನ ನಕ್ಷತ್ರವಾಗಬಹುದು
ನೆಲದ ಕಕ್ಷೆ ದಾಟಿ
ಸಮೀಕ್ಷೆ ಮಾಡಲಾಗದ ನಭದ ವ್ಯೂಹ ಸಮುದ್ರದೊಳಗೆ
ಬೆಳಕಿನ ಚಿಂದಿಯಾಗಿ ತೂಗಾಡಬಹುದು

ಬುದ್ದ
ಇದ ತೊದಲಿ ನಾದವಾಗಿ
ಜೀವ ಮಂಡಲದ ಕಾಲದಲಿ
ಕರಗಿ ಹೋದ

ಇದ್ದವನೊಬ್ಬ ಗೆಳೆಯ
ಇವನೂ
ನಕ್ಷತ್ರದ ಸೆಳವಿಗೆ ಸಿಕ್ಕು
‘Let my funeral be silent and smooth’ ಅಂದು ರೂಪಾಂತರವಾದ …

ಇಲ್ಲಿ ಉಸಿರಿದ್ದವರ ಪಾಡೇನು?

ಮೌನದಲ್ಲಿ ಮಣ್ಣು ಮಾಡುವುದು
ಇವನನೊಬ್ಬನದೆ ಆಗಿದ್ದರೆ
ನಾನು ಅನುದಿನವೂ ಹೆಣಭಾರವಾಗಿ
ಬರೀ ಕೂಳು ಮಡಕೆಯ ಬೋಕಿ ಪಿಲ್ಲೆಗಳೆ
ದಾರಿಯಾದಲ್ಲಿ
ಓಡಾಡುತ್ತಿರಲಿಲ್ಲ ..

ಅಬ್ಬಾ..
ಭಾರವಾದ ಉಸಿರನ್ನು ಎಷ್ಟೆಂದು ಹೊರುವುದು,ಹೇರುವುದು
ಬದುಕಿದ್ದವರ ಬಿಕ್ಕಳಿಕೆಗಳು ಬದುಕಿದ್ದವರಿಗೇ ತಲುಪುವುದಿಲ್ಲ
ನಕ್ಷತ್ರವಾದವರಿಗೆ ತಲುಪುತ್ತವೆ ಎಂದು ಹೇಗೆ ನಂಬುವುದು ?

‍ಲೇಖಕರು avadhi

January 17, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: