ರೇಖಾ ಚಿತ್ರಗಳಲ್ಲಿ ಗಾರುಡಿ ಮಾಡುವ ಪುಂಡಲೀಕ ಕಲ್ಲಿಗನೂರ ‘ರೇಖಾನುಸಂಧಾನ’ ಬಿಡುಗಡೆಯಾಯಿತು. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಜರುಗಿದ ಸಮಾರಂಭದಲ್ಲಿ ಚಿ ಸು ಕೃಷ್ಣ ಸೆಟ್ಟಿ, ಪುಂಡಲೀಕ ಹಾಲಂಬಿ, ಎಂ ಎಚ್ ಕೃಷ್ಣಯ್ಯ, ಅಜಿತ್ ಘೋರ್ಪಡೆ ಭಾಗವಹಿಸಿದ್ದರು.
ರೂಪಶ್ರೀ, ಶಿಲ್ಪಶ್ರೀ ತಮ್ಮ ಹಾಡುಗಳ ಮೂಲಕ ರೇಖೆಗೆ ನಾದದ ರಂಗು ತುಂಬಿದರು. ಆ ಸಂಭ್ರಮದ ನೋಟ ಇಲ್ಲಿದೆ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ
ಮೊದಲ ಬಾರಿಗೆ ಪುಂಡಲೀಕ ಕಲ್ಲಿಗನೂರು ಅವರ ರೇಖಾ ಚಿತ್ರಗಳು ನನ್ನ ಕಣ್ಣಿಗೆ ಬಿದ್ದದ್ದು ಜರಗನಹಳ್ಳಿ ಶಿವಶಂಕರ್ ಅವರ ಝರಿ ಎಂಬ ಕವನ ಸಂಕಲನದಲ್ಲಿ.. ಆ ಪುಸ್ತಕದಲ್ಲಿ ಪುಂಡಲೀಕ ಅವರ ಕುರಿತು ಲಂಕೇಶರು ಎಂದೋ ಬರೆದಿದ್ದ ಪತ್ರವೊಂದು ಇತ್ತು ಎಂದು ನೆನಪು.. ಚಂದದ ಕಲಾವಿದ ಪುಂಡಲೀಕ ಅವರ ಪುಸ್ತಕ ಬಿಡುಗಡೆಯ ಕುರಿತು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..
‘ರೇಖಾನುಸಂಧಾನ ‘ ಪುಸ್ತಕ ಪತ್ರಿಕೋದ್ಯಮ ಚಿತ್ರಕಲೆಯ ಹಿನ್ನೆಲೆಯಲ್ಲಿ ಬಂದ ಕನ್ನಡದ ಮೊದಲ ಪುಸ್ತಕ ಎನಿಸುತ್ತದೆ.ಪುಂಡಲೀಕರ ಬೆಸ್ಟ್ ರೇಖಾ ಚಿತ್ರಗಳನ್ನು ಒಂದೇ ಕಡೆ ನೋಡುವ ಖುಷಿ.ಪುಸ್ತಕದ ಬಗ್ಗೆ ಕುತೂಹಲ ಇದೆ.ಅಭಿನಂದನೆಗಳು ಸರ್.
ಸೃಜನ್
Hi
sakattagati mudavrisu beedabada