ರೇಖಾ ರಂಗನಾಥ ಹೊಸ ಕವಿತೆ – ‘ಅನಂತದೆಡೆಗೆ’

ರೇಖಾ ರಂಗನಾಥ

**

ನೀಲಾಕಾಶದಿ

ಇಳೆಗೆ ಚದುರಿದ್ದು

ರಶ್ಮಿಗಳೋ! ಸ್ವಪ್ನ ಗಳೋ!

ಮಧ್ಯಾಹ್ನದ

ಸುಡು ಬಿಸಿಲಿಗೆ

ಗಡಿಯಾರದ ಮುಳ್ಳುಗಳ

ಚಲನೆಯೇ ಸಾಕು!

ಸಂಜೆ ಮುಂಜಾವು

ಘಮ್ಮೆಂದ ಹೂ ಹಬ್ಬ

ತೊಟ್ಟು ಕಳಚಿದ ಕ್ಷಣ

ದರಗು ನಿಬಿಡ ಹಾಸು.

ಗೋಧೂಳಿ

ಕೆಂದುಟಿಯಲಿ ಮಿಂದು

ಕವಿತೆಯೊಂದು

ಪೂರ್ಣ ಚಂದಿರನಿರದ

ಕಾನಗತ್ತಲಿಗೆ

ಅಪೂರ್ಣ..

ಮಾತಿಗಿಳಿಯುವ

ಗೋಡೆ ಸ್ಥಬ್ಧ ಚಿತ್ರಗಳು

ಮೊನಚು  ಗೀರು ಗಾಯದಂತೆ

ಒಂದೊಮ್ಮೆ

ಮಿಣುಕು ದೀಪದ ಬೆಳಕು

ಭಗ್ನ ಸೇತುವೆಯ

ನಟ್ಟಿರುಳ ನಿರ್ಜನ ಹಾದಿಯಲೂ

ರಸ್ತೆಗೊಂದು ತಿರುವು

ತಿರುವಿಗೆ 

ಹಾದಿಯೊಂದು

ಹಗಲು ಹೊದ್ದು

ಧೋ! ಸುರಿವ ಮಳೆ

ತೆರೆದೆದೆಯ ಆಗಸವು

ಅಪ್ಪುತಿದೆ

ಮಣ್ಣ ಕಣ ಕಣವನು

ಮತ್ತೆ..

ಹಕ್ಕಿ ತುಡಿತ

ಚಿಗುರು ಮಾವು ಬೇವು.

‍ಲೇಖಕರು Admin MM

February 21, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: