ಎ೦ ಎಸ್ ಮೂರ್ತಿಯವರ ಈ ರೇಖಾ ಚಿತ್ರ ಕ೦ಡಾಗ ನೆನಪಾದದ್ದು ಬೇ೦ದ್ರೆಯವರ ಈ ಸಾಲುಗಳು :
ಭೂವನ ಕುಸುಮಿಸಿ, ಪುಲಕಿಸಿ, ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿರೆ
ಮರುಕದ ಧಾರೆಯ ಮಸೆಯಿಸಿತು
]]>
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಯಾರೂ ಕರೆದರೋ, ಎನ್ನ ತೆರೆದರೋ
ಬೆರಳ ರೇಖೆಗೆ ತಬ್ಬಿ
ಉಸಿರ ಗಾಳಿಗೆ ಬಿಸಿಯ ಸುರಿಯುತಾ
ಬೆಟ್ಟ ಸ್ಪರ್ಶ ಉಬ್ಬಿ
ಲಜ್ಜೆ ಮರೆತಿದೆ,ರಾಗ ಮೌನಕೆ
ಭಾನು ಭೂಮಿಗೆ ಬಗ್ಗಿ
ಜಲವ ತೆರೆಯುತಾ ತೊರೆಯ ಉಕ್ಕಿಸಿ
ನೊರೆಯ ಜಳಕಕೆ ಹಿಗ್ಗಿ
ಹಸಿರ ಹಸಿವಿಗೆ ನೆರೆದ ಮೈಯಿದು
ಹಕ್ಕಿ ಊಟಕೆ ಹಣ್ಣು
ಹಗಲು ಲಯದಲಿ, ರಾತ್ರಿ ಸೃಷ್ಠಿಗೆ
ಮುಚ್ಚಿ ತೆರೆದಿದೆ ಕಣ್ಣು.