ರಾಮಾಯಣದಲ್ಲಿ ನಿಜವಾಗಿಯೂ ಸೀತೆ ಟಸ್ಸಾರ್ ಸೀರೆ ಉಟ್ಟಿದ್ದಳೇ?

ಡಾ ಸುನಿಲ್ ಕುಮಾರ್

ಮೈ ಮರೆತ ಭಾರತ, ರೇಷ್ಮೆ ಭಾರತದ್ದು ಎಂದು ಹೇಳಿಕೊಳ್ಳಲು ಪುರಾವೆಗಳು ಇರುವಾಗ ಅಂಜಿಕೆ ಏಕೆ?

ಅಂದು ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿಯಲ್ಲಿ ಸ್ನಾತಕ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ರೇಷ್ಮೆಹುಳುವಿನ ವಂಶಾವಳಿ (ಉeಟಿeಚಿಟogಥಿ) ಬಗ್ಗೆ ಪಾಠ ಹೇಳಿ ಮುಗಿಸುವ ಸಮಯಕ್ಕೆ ಕೌತುಕದ ವಿಚಾರವೊಂದನ್ನ ವಿದ್ಯಾರ್ಥಿಗಳ ಮುಂದಿಟ್ಟೆ. ೪೦೦೦ ವರ್ಷಗಳ ಹಿಂದೆ ರೇಷ್ಮೆಕೃಷಿ ತಂತ್ರಜ್ಞಾನ ಚೀನಾದಲ್ಲಿ ಕಣ್ ತೆರೆಯಿತು ಎಂಬ ವ್ಯಾಖ್ಯಾನಕ್ಕೆ ತದ್ವಿರುದ್ದವಾದ ಅಂಶಗಳೆಂದರೆ, ಕ್ರಿ.ಪೂ ೧೨೦೦೦ ರ ರಾಮಾಯಣ ಹಾಗೂ ೫೦೦೦ರ ಮಹಾಭಾರತದಲ್ಲಿ ರೇಷ್ಮೆ ಉಲ್ಲೇಖವಿರುವಾಗ ಹೇಗೆ ರೇಷ್ಮೆ ಚೀನಾದ ಪಾಲಾಯಿತು? ರಾಮಾಯಣದ ಸೀತೆ ಭಾರತೀಯರಿಗೆ ಯಾವ ಸೀರೆ ತೊಟ್ಟಿದ್ದಳು ಎಂದು ಹೇಳದೆ ಮೋಸಮಾಡಿರಬೇಕು. ಮೈಸೂರ್‌ಸಿಲ್ಕ್, ಧರ್ಮವರಂ, ಕಾಂಚಿಪುರಂ, ಮೂಗ, ಎರಿ ಅಥವಾ ಟಸಾರ್ ರೇಷ್ಮೆಯಾ ಎಂದು ಸೀತೆ ಹೇಳಿದ್ದರೆ ಬಹಳ ಸಹಾಯವಾಗುತ್ತಿತ್ತು. ನಿಜವಾಗಿಯೂ ರೇಷ್ಮೆ ಚೀನಾದ್ದೊ ಅಥವಾ ಭಾರತದ್ದೊ ಎಂದು ಹೇಳುವಾಗ, ನನ್ನ ವಿದ್ಯಾರ್ಥಿಮಿತ್ರ ಆದರ್ಶ ಸರ್, ಸೀತಾ ಟಸಾರ್ ರೇಷ್ಮೆಸೀರೆ ತೊಟ್ಟಿದ್ದಳು ಎಂದ…!

ನಾನು ಅವನ ಉತ್ತರಕ್ಕ ಪುರಾವೆ ಕೇಳಿದಾಗ ಕೆಲಪುಸ್ತಕದ ಪುಟಗಳನ್ನು ತೋರಿಸಿದ ಅಲ್ಲಿಂದ ಕೆಲವು ದಿನಗಳವರೆಗೆ ನನ್ನ ತಲೆಯಲ್ಲಿ ಅಲೋಚನೆ ಆರಂಭವಾಯಿತು. ಅದಕ್ಕೆ ತಕ್ಕಂತೆ ಡಾ. ರಾಮಕೃಷ್ಣನಾಯ್ಕ್ ಕೂಡಾ ಸಾಥ್‌ ಕೊಟ್ಟರು. ಇಲ್ಲಿ ಪ್ರಶ್ನೆ ಚೀನಾದ ಚರಿತ್ರೆಗಿಂದ ಮುಂಚೆ ದಾಖಲಾಗಿರುವ ಮಹಾಭಾರತ ಅಥವಾ ರಾಮಾಯಣದಲ್ಲಿ ನಿಜವಾಗಿಯೂ ಸೀತೆ ಟಸ್ಸಾರ್ ಸೀರೆ ಉಟ್ಟಿದ್ದಳೇ? ಅವಳು ಒಂದು ವೇಳೆ ಉಟ್ಟಿದ್ದೇ ಅದಲ್ಲಿ ರೇಷ್ಮೆಕೃಷಿ ತಂತ್ರಜ್ಞಾನ ನೂಲು ಬಿಚ್ಚಾಣಿಕೆ ತಂತ್ರಜ್ಞಾನ ಪ್ರಪಂಚಕ್ಕೆ ಭಾರತ ಕೊಟ್ಟ ಕೊಡುಗೆಯಲ್ಲವೆ? ಈ ವಿಷಯವನ್ನು ಸತ್ಯವೊ ಮಿಥ್ಯವೊ ಎಂಬಂತೆ ರಾಮಾಯಣ ಮಹಾಭಾರತದಲ್ಲಿ ಉಲ್ಲೇಖದ ಅಡಿಯಲ್ಲಿ ಚರ್ಚಿಸುವುದಾದರೂ ಹೇಗೆ? ಕೆಲವು ವೈಜ್ಞಾನಿಕ ಕಾರಣದ ಆಧಾರದ ಮೇಲೆ ವಿಷಯ ಮಂಡಿಸಿದರೂ ಜನರು ನಂಬಬಹುದೇ? ಎನ್ನುವ ತೊಳಲಾಟದಲ್ಲಿ ಇದ್ದಾಗ ನೆನಪಾದ್ದದೆ ಜೀವವಿಕಾಸ ಸಿದ್ದಾಂತದ ಡಾರ್ವಿನರು.

ಕ್ರಿ.ಶ. ೧೮೩೧-೧೮೩೬ ರ ಸಮಯವದು ಶತಮಾನಗಳ ಮೂಢ್ಯತೆಯ ಬುಡಮೇಲು ಮಾಡುವ ಸಂಶೋಧನೆಯ ಸಾಬೀತಿಗಾಗಿ ಸಾಕ್ಷಿಕಲೆ ಹಾಕುತ್ತಾ ಮಹಾವಿಜ್ಞಾನಿ ಚಾರ್ಲ್ಸ್‌ಡಾರ್ವಿನ್ ಬೀಗಲ್ ಹಡಗಿನಲ್ಲಿ ಪ್ರಪಂಚ ಸುತ್ತುತ್ತಾ ಹೊರಟ್ಟಿದ್ದ. ಸಮುದ್ರಮಾರ್ಗದಲ್ಲಿ ಚಲಿಸುವಾಗ ಸಮಕಾಲಿನ ವಿಜ್ಞಾನಿ ಆಲ್ಫ್ರೆಡ್ ರುಸೆಲ್ ವ್ಯಾಲೆಸ್‌ರ ಕಾಗದ ತಲುಪಿದಾಗ ಡಾರ್ವಿನ್ ಬೆವೆತು ಹೋಗಿದ್ದರು. ತನ್ನ ಜೀವನದ ಅವಿರತ ಸಂಶೋಧನೆಯ ತಿರುಳೇ ಆ ಕಾಗದದಲ್ಲಿ ಇತ್ತು. ಆದರೆ ವ್ಯಾಲೆಸ್, ಡಾರ್ವಿನ್ ಸಂಶೋಧನೆಯು ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗದೆ ಅದಕ್ಕೆ ಪೂರಕವಾದ ಸಾಕ್ಷಿಗಳಿಗಾಗಿ ಪ್ರಪಂಚ ಪರ್ಯಟನೆ ಕೈಗೊಂಡಿದ್ದನ್ನು ಕಂಡು, ವ್ಯಾಲೆಸ್ ಅವರ ಸಂಶೋಧನೆಯ ಅಪಾರ ಯಶಸ್ಸನ್ನು ಡಾರ್ವಿನರಿಗೆ ಬಿಟ್ಟುಕೊಟ್ಟಿದ್ದರು. ಕ್ರಮೇಣ ೧೮೫೯ ನವೆಂಬರ್ ೨೪ ರಂದು Origin of Species ಎಂಬ ಕೃತಿ ಬಿಡುಗಡೆ ಆಗುತ್ತಿದ್ದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಜನರಲ್ಲಿ ತುಂಬಿದ ಕತ್ತಲೆಯ ಸೀಳುವ ಮೊದಲ ಮಿಂಚು ಮಿಂಚಿತ್ತು.

ಅಲ್ಲಿಯವರೆಗೂ ಜೀವಿಗಳು ಸೃಷ್ಟಿಕರ್ತನಿಂದ ಮಾಡಲ್ಪಟ್ಟಿವೆ ಎನ್ನುವ ಅವೈಜ್ಞಾನಿಕ ಭಾವನೆಯಲ್ಲಿ ಮುಳುಗಿದ್ದ ಜನರೆದುರು ಡಾರ್ವಿನರು ತಮ್ಮ ವಾದಗಳನ್ನ ಸಾಕ್ಷಿಸಮೇತ ಮಂಡಿಸಿದಾಗಲೂ ಅದನ್ನು ನಂಬಲು ಸಿದ್ದರಿರಲಿಲ್ಲ. ಕಾಲಕ್ರಮೇಣ ಜೀವವಿಕಾಸ ಸಿದ್ದಾಂತಕ್ಕೆ ಹೆಗಲು ಕೊಡುವಂತೆ ಗ್ರೀಕ್ ವಿಜ್ಞಾನಿ ಅರಿಸ್ಟಾಟಲ್‌ರ Physical Asculation, ಬಳಿಕ ಅರ್ಥಶಾಸ್ತ್ರಜ್ಞ ಮಾಲ್ಥಸ್‌ರ Variation under domestication ಒಂದಿಷ್ಟು ವಿಜ್ಞಾನ ವಾದಕ್ಕೆ ಪುಷ್ಟಿಕೊಟ್ಟರೂ, ಜನರಿಗೆ ನಂಬಿಕೆ ಬರಲಿಲ್ಲ. ಆದರೆ ೧೯ನೇ ಶತಮಾನದಲ್ಲಿ ಡಿ.ಎನ್.ಎ. ಸಂಶೋಧನೆ ಹಾಗೂ ಮೆಂಡೇಲರ ಅನುವಂಶೀಯ ಸಿದ್ದಾಂತ ವಿಜ್ಞಾನದ ಯುಗದಲ್ಲಿ ಮಹಾಕ್ರಾಂತಿಯ ಮೈಲುಗಲ್ಲಾಗುವುದರ ಜೊತೆಗೆ ಡಾರ್ವಿನರ ಜೀವ ವಿಕಾಸಕ್ಕೆ ಬೆನ್ನೆಲುಬಾಗಿ ನಿಂತಿತು. ವಿಜ್ಞಾನದ ಆಲೋಚನೆಗಳೇ ಹೀಗೆ ಎಷ್ಟೇ ಸ್ಟಷ್ಟವಾಗಿ ಮಂಡಿಸಿದರೂ ಕಾರಣಾಂತರಗಳಿಂದ ಬೇಗ ಸ್ವೀಕೃತವಾಗುವುದೇ ಇಲ್ಲ. ಅದನ್ನು ಒಪ್ಪಿ ಸ್ವೀಕರಿಸಲು ಸಮಯವೇ ಬೇಕಾಗುತ್ತದೆ.

ಇಂತಹದ್ದೇ ರೀತಿಯಲ್ಲಿ ಎಷ್ಟೋ ಸತ್ಯಗಳು ಜನರ ನಂಬಿಕೆಯಿಂದ ದೂರ ಉಳಿದಿವೆ. ಅಂತಹವುಗಳಲ್ಲಿ ಭಾರತವನ್ನು ರೇಷ್ಮೆಯ ಉಗಮಸ್ಥಳವೆಂದರೆ ಯಾರಾದರೂ ನಕ್ಕು ಬಿಡಬಹುದು ಕಾರಣ, ಪ್ರಪಂಚದಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾ ದೇಶವು ರೇಷ್ಮೆಯ ಉಗಮ ಸ್ಥಳ (Centre of Origin for Silk) ಎಂಬ ಹಣೆಪಟ್ಟಿ ತೊಟ್ಟಿರುವಾಗ, ಭಾರತ ರೇಷ್ಮೆಯ ದಂತಕಥೆಯೇ? ಎನಿಸಿಬಿಡುತ್ತದೆ. ಆದರೆ ಇಲ್ಲಿಯೇ ಇರುವುದು ಕೌತುಕ ವಿಜ್ಞಾನ. ಓದಿಕೊಂಡು ಮಾರ್ಕ್ಸ್ ತೆಗೆದು ಪದವಿ, ಡಾಕ್ಟರೇಟ್, ಚಿನ್ನದ ಪದಕಗಳನ್ನು ಬಾಚುವ ಬಹಳ ಮಂದಿ ಓದಿದ ವಿಜ್ಞಾನವನ್ನು ಯೋಚನೆಗೆ ಹಚ್ಚುವುದನ್ನು ಸಂಪೂರ್ಣವಾಗಿ ಮರೆತಿದ್ದೇವೆ.

ಬಹುಮುಖ್ಯವಾಗಿ ಚೀನಾದೇಶದಲ್ಲಿ ಕಾಣಸಿಗುವ ಚೀನಾ Bombyx mandarina (ವರ್ಣತಂತುಗಳ ಸಂಖ್ಯೆ: ೨ಟಿ=೫೬)ವನ್ನು ಪ್ರಪಂಚದೆಲ್ಲಡೆ ಇಂದಿನ ಹಿಪ್ಪುನೇರಳೆ ರೇಷ್ಮೆಹುಳು Bombyx mori ಐ.ನ (ವರ್ಣತಂತುಗಳ ಸಂಖ್ಯೆ: ೨ಟಿ=೫೬) ಪೂರ್ವಜ (Wild ancesture) ಎಂದು ನಂಬಲಾಗಿದೆ. ಚೀನಾದಲ್ಲಿ Bombyx mandarina ಮೊದಲು ಗುರುತಿಸಿಕೊಂಡದ್ದರಿಂದ ಚೀನಾವನ್ನ ರೇಷ್ಮೆಯ ಉಗಮ ಸ್ಥಾನ ಎಂದು ಬಿಂಬಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಚೀನಾದ ಚರಿತ್ರೆಯ ಪುಟಗಳು ಕೂಡ ಹೇಳಿಕೊಳ್ಳುತ್ತವೆ. ಸರಿಸುಮಾರು ೪೦೦೦ ವರ್ಷಗಳ ಹಿಂದೆ ಹ್ಸಿ ಲಿಂಗ್ ಶಿ (Hsi ling shi) ಎಂಬ ರಾಜಕುಮಾರಿ ಅರಮನೆಯ ಹಿತ್ತಲಲ್ಲಿ ಚಹಾ ಸೇವಿಸುವಾಗ ಅಚಾನಕ್ ಗೂಡೊಂದು ಬಿಸಿ ಚಹಾದಲ್ಲಿ ಬಿದ್ದದ್ದು, ಬಳಿಕ ಅದನ್ನ ಹೊರ ತೆಗೆಯ ಹೊರಟಾಗ ದಾರವಾಗಿ ಹೊಸರೂಪ ಪಡೆದದ್ದು ಅಲ್ಲಿಂದ ಚೀನಾದ ಚರಿತ್ರೆಯಲ್ಲಿ ರೇಷ್ಮೆಸಾಕಾಣಿಕೆ ಆರಂಭವಾದ ಚರಿತ್ರೆ ನಮಗೆ ಅನೇಕ ಪುಸ್ತಕದ ಪುಟಗಳಲ್ಲಿ ಕಂಡು ಬರುತ್ತವೆ. ಕ್ರಮೇಣ ಪಾಶಿಮಾತ್ಯ ರಾಷ್ಟ್ರಗಳಾದ ಕೊರಿಯಾ, ಪರ್ಷಿಯಾ, ಜಪಾನ್ ಮತ್ತು ರೋಮ್‌ಗೆ ವ್ಯಾಪಾರಿಗಳ ಮುಖಾಂತರ ಪೂರ್ವದಿಕ್ಕಿನ ಚೀನಾದಿಂದ ಪಾಶಿಮಾತ್ಯ ರಾಷ್ಟ್ರಗಳಿಗೆ ಸರಿಸುಮಾರು ೬೪೦೦ ಕಿ.ಮಿ. ಕ್ರಮಿಸಿತು. ರೇಷ್ಮೆಕೃಷಿ ತಂತ್ರಜ್ಞಾನ ಪರಿಚಯವಾದ ಈ ಸುದೀರ್ಘ ಯಾನದ ಹೆದ್ದಾರಿ ಇಂದಿಗೂ ಪ್ರಪಂಚದ ಚರಿತ್ರೆಯಲ್ಲಿ ಸಿಲ್ಕ್‌ರೂಟ್ (Silk route)ಎಂದು ದಾಖಲಾಗಿದೆ. ಬಳಿಕ ಚೀನಾದ ರಾಜುಕುಮಾರಿಯೋರ್ವಳನ್ನ ಟೆಬೆಟಿನ ರಾಜನಿಗೆ ಮದುವೆ ಮಾಡಿಕೊಟ್ಟಾಗ ರೇಷ್ಮೆ ತಂತ್ರಜ್ಞಾನ ಟಿಬೆಟಿಗೆ ಪರಿಚಯವಾದದು ಟಿಬೆಟ್‌ನಿಂದ ಭಾರತಕ್ಕೆ ಬೌದ್ಧಬಿಕ್ಕುಗಳು ರೇಷ್ಮೆಯನ್ನು ಪರಿಚಯಿಸಿದ್ದು ಇಂದಿಗೂ ಓದುತ್ತೇವೆ. ಇಲ್ಲಿ ಸ್ಪಷ್ಟವಾಗುವುದು ರೇಷ್ಮೆಯ ಪೂರ್ವಜ Bombyx mandarina ಚೀನಾದಲ್ಲಿ ಕಾಣಿಸಿಕೊಂಡದ್ದು, ೪೦೦೦ ವರ್ಷಗಳ ಹಿಂದೆ ರೇಷ್ಮೆ ಸಾಕಾಣಿಕೆ ಆರಂಭವಾದದ್ದು ದಾಖಲೆಗಳಿರುವುದರಿಂದ ಚೀನಾ ಪ್ರಪಂಚದ ಒಟ್ಟಾರೆ ರೇಷ್ಮೆಯ ಉಗಮ ಸ್ಥಳವಾಯಿತು ಎಂಬುದು ತಿಳಿದು ಬರುತ್ತದೆ.

ಪೂರ್ವದಿಕ್ಕಿನ ಚೀನಾದಿಂದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರೇಷ್ಮೆ ತಂತ್ರಜ್ಞಾನ ಪರಿಚಯವಾದ ಮಾರ್ಗವನ್ನು ಸಿಲ್ಕ್ ರೂಟ್ (Silk route) ಎನ್ನಲಾಗುತ್ತದೆ.

ಆದರೆ ಇಲ್ಲಿ ಓದುಗರ ಕಣ್ಣುಬ್ಬೇರುವಂತೆ ಮಾಡುವುದು, ಕ್ರಿ.ಪೂ. ೫೦೦೦ ವರ್ಷಗಳ ಹಿಂದೆ ನಡೆದ ಮಹಾಭಾರತ ಮತ್ತು ಕ್ರಿ.ಪೂ ೧೨೦೦೦ ವರ್ಷಗಳ ಹಿಂದೆ ನಡೆದ ರಾಮಾಯಣದಲ್ಲಿ ಉಲ್ಲೇಖವಾಗುವ ರೇಷ್ಮೆ ಚೀನಾದಲ್ಲಿ ರೇಷ್ಮೆಬೆಳಕಿಗೆ ಬರುವುದಕ್ಕಿಂತ ಮುಂಚೆಯೇ ರೇಷ್ಮೆ ಭಾರತದ ಮೂಲದ್ದು ಎಂಬುದನ್ನು ಎತ್ತಿಹಿಡಿಯುತ್ತದೆ. ಅಲ್ಲದೆ Harappa Archrolgical Research Project (HARP) ಇತ್ತೀಚೆಗೆ ನೀಡಿದ ಫಲಿತಾಂಶವೂ ಭಾರತದಲ್ಲಿ ರೇಷ್ಮೆ ಬಳಕೆ ಚೀನಾಕ್ಕಿಂತಲ್ಲೂ ಮುಂಚೆ ಇತ್ತು ಎನ್ನುವುದನ್ನು ಋಜುವಾತು ಮಾಡಿದೆ.

ಕೌತುಕವೆಂದರೆ ಹಿಪ್ಪುನೇರಳೆ ರೇಷ್ಮೆಹುಳು Bombyx mori L.. ಹೊರತುಪಡಿಸಿ ಇತರೇ ರೇಷ್ಮೆಹುಳುಗಳಾದ ಎರಿ, ಮೂಗ, ಟಸ್ಟಾರ್ ಇತ್ಯಾದಿ ಭಾರತೀಯ ನೆಲೆಯಲ್ಲಿ ಭದ್ರವಾಗಿ ಬೇರೂರಿ ನಿಂತಿದೆ.

೧೯೨೪ ರಲ್ಲಿ ನಿಕೊಲೈ ವೆವಿಲೊ ಅವರೇ ಹೇಳುವಂತೆ ಯಾವುದೇ ಭೌಗೋಳಿಕ ಪ್ರದೇಶವನ್ನು ಜೀವಪ್ರಭೇದದ ಮೂಲವೆಂದು ಪರಿಗಣಿಸಬೇಕೆಂದರೆ ಆ ಪ್ರದೇಶದಲ್ಲಿ ಆ ಜೀವ ಪ್ರಭೇದದ ಪೂರ್ವಜರು ಹುಟ್ಟಿ ಅಲ್ಲಿ ತಮ್ಮ ಸಂತತಿಯನ್ನು ಬೆಳೆಸುತ್ತಾ, ಸಹ ಪ್ರಭೇದ, ಜಾತಿಗಳಾಗಿ ಜೀವ ವೈವಿದ್ಯತೆ ಮೆರೆದಿರಬೇಕಾಗಿರುತ್ತದೆ. ಈ ವಿಜ್ಞಾನ ಸಿದ್ದಾಂತದಡಿ ಒಮ್ಮೆ ನೋಡುವಾಗ ನಿಜವಾಗಿಯೂ ಚೀನಾ ಒಟ್ಟಾರೆ ರೇಷ್ಮೆಯ ಉಗಮ ಸ್ಥಳವೇ? ಅಥವಾ ಕೇವಲ ಹಿಪ್ಪುನೇರಳೆ ರೇಷ್ಮೆಯ ಉಗಮಸ್ಥಳವೇ? ಅಥವಾ ಚೀನಾವನ್ನು ಹೊರತುಪಡಿಸಿ ಬೇರೆ ಇನ್ನಾವ ದೇಶವಾದರೂ ಇರಬಹುದೇ ಎಂಬ ಕೌತುಕಮಯ ಪ್ರಶ್ನೆಗಳು ಉದ್ಭವಿಸುವುದು ಸತ್ಯ.

ಇನ್ನು ವಿಜ್ಞಾನದ ಭೂತಗನ್ನಡಿಯಲ್ಲಿ ಗಮನಿಸಿದಾಗ, ರೇಷ್ಮೆಯ ಪೂರ್ವಜನಾಗಿ ಗುರುತಿಸಲ್ಪಡುವ ಚೀನಾದ Bombyx mandarina (೨ಟಿ=೫೬) ಹೊರುತುಪಡಿಸಿ ಜಪಾನಿನಲ್ಲಿ Bombyx mandarina (೨ಟಿ=೫೪) ಎನ್ನುವ ಒಂದು ಪ್ರಭೇದ ಕಂಡುಬರುತ್ತದೆ. ಜೀವವಿಕಾಸದ ಸಿದ್ದಾಂತದ ಪ್ರಕಾರ ಸಾಮಾನ್ಯವಾಗಿ ಕಡಿಮೆ ವರ್ಣತಂತುಗಳಿಂದ ಹೆಚ್ಚು ವರ್ಣತಂತುಗಳೆಡೆಗೆ ಜೀವ ವಿಕಾಸ ಸಾಗುವ ಸಾರ್ವಕಾಲಿಕ ಸತ್ಯ ಇದೆ (From lower ploidy to higher ploidy) ಹಾಗಾದರೆ ಜಪಾನಿನಲ್ಲಿಯ B. mandarina ವರ್ಣ ತಂತುಗಳು (೨ಟಿ=೫೪) ಮತ್ತು ಚೀನಾದಲ್ಲಿ B. mandarina ವರ್ಣತಂತು ೨ಟಿ=೫೬ ಹೊಲಿಕೆ ಮಾಡಿದಾಗ ಜಪಾನನ್ನು ನಿಜವಾಗಿಯೂ B. mandarina ದ ಉಗಮ ಸ್ಥಳವೆಂದು ಏಕೆ ಗ್ರಹಿಸಲಿಲ್ಲ? ಎಂಬ ಪ್ರಶ್ನೆ ಹುಟ್ಟುತ್ತದೆ.

ಸಾಮಾನ್ಯವಾಗಿ ಉಗಮಸ್ಥಳದಲ್ಲಿ ಹೆಚ್ಚು ವೈವಿದ್ಯತೆ ತೋರುವ ಆ ಜೀವಿಯು ಜಾತಿಗಳಾಗಿ, ಪ್ರಭೇದಗಳಾಗಿ ವೃದ್ಧಿಯಾಗಿ ವ್ಯಾಪಕ ವೈವಿದ್ಯತೆ ತೋರಿಸುತ್ತಾ ನೆಲೆಸಬೇಕು. ಹಾಗಾದರೆ ಇಲ್ಲಿ ವೈವಿದ್ಯತೆ ಎನ್ನುವುದು, ಹೆಚ್ಚು ವರ್ಣತಂತುಗಳು ಇದ್ದರಷ್ಟೇ ವೈವಿದ್ಯತೆ ಹೆಚ್ಚಾಗುತ್ತದೆ. ಭಾರತದಲ್ಲಿಯ ಟಸಾರ್ (Antheraca mylitta D)ನಲ್ಲಿ ೨ಟಿ=೬೨ ವರ್ಣತಂತುಗಳು ಕಂಡುಬರುವುದಲ್ಲದೆ ಅದರ ಸರಿಸುಮಾರು ೪೪ Ecoraceಗಳು ವೃದ್ಧಿಗೊಂಡು ನೆಲೆನಿಂತಿವೆ.

ಇನ್ನೂ ಸಂಕ್ಷಿಪ್ತವಾಗಿ ನೋಡುವುದೇ ಆದರೆ ಭಾರತೀಯ ಮೂಲದ ಓಕ್ ಟಸಾರ್ (Antheraea proylei J Antheraea proylei J (೨ಟಿ=೯೮) ಎನ್ನುವ ರೇಷ್ಮೆತಳಿಕೂಡ ಭಾರತೀಯ Antheraea roylei (೨ಟಿ=೬೦) ಹಾಗೂ ಚೀನಾದ A. pernyi G.M. (೨ಟಿ=೪೯) ತಳಿಗಳ ನಡುವಣ ಸಂಕರಣದಿಂದ ವೃದ್ಧಿಯಾಗಿದ್ದಲ್ಲದೆ ಭಾರತೀಯ ಮೂಲದಲ್ಲಿ ತನ್ನ ಜೀವವೈವಿದ್ಯತೆ ಕವಲುಗಳನ್ನ ಹಿಮಾಲಯದ ತಪ್ಪಲು ಹಾಗೂ ಈಶಾನ್ಯ ಭಾರತದಲ್ಲಿ ಹಬ್ಬಿಸಿ ನಿಂತಿದೆ. ಹೆಚ್ಚಾಗಿ ಕಂಡು ಬರುವ ಟಸ್ಟಾರ್ ರೇಷ್ಮೆಯ ವಂಶವೃಕ್ಷವನ್ನು ಪತ್ತೆಹೆಚ್ಚುವಲ್ಲಿ ಇನ್ನೂ ಸಂಶೋಧನೆಯ ಅವಶ್ಯಕತೆ ಇದೆ.

ಚೀನಾದ A. pernyi (೨ಟಿ=೪೯) ಅನ್ನುವ ರೇಷ್ಮೆಹುಳು ಕೂಡ ಜಪಾನಿನ ಮೂಲದ A. yamamai ಮೂಲಕ ವಿಕಾಸಗೊಂಡಿದೆ ಎಂದು ಡಿ.ಎನ್.ಎ. ಆಧಾರಿತ ಸಂಶೋಧನಾ ಫಲಿತಾಂಶಗಳು ದೃಢಪಡಿಸಿದೆ.

ಪ್ರಪಂಚದ ಭೂಪಟದಲ್ಲಿ ಭಾರತದಲ್ಲಿ ಮಾತ್ರ ಕಾಣಸಿಗುವ ಮೂಗ ರೇಷ್ಮೆಹುಳುಗಳು Antheraea assamensis (೨ಟಿ=೩೦) ಬಹುತೇಕ ಅಸ್ಸಾಂ ರಾಜ್ಯದಲ್ಲಿ ಹೊಂದಿಕೊಂಡು ತನ್ನ ಜೀವವೈವಿದ್ಯತೆಯನ್ನು ಬೆಳೆಸಿಕೊಂಡಿವೆ. ಭಾರತೀಯ ಮೂಲದ ಈ ಪ್ರಭೇದದ ಸುಮಾರು ೨೪ ಪ್ರಬೇದಗಳು ಪತ್ತೆಯಾಗಿರುವುದು ಮೂಗ ರೇಷ್ಮೆಯ ಉಗಮ ಭಾರತದ್ದು, ಎನ್ನುವಷ್ಟು ಭಾರತಕ್ಕೆ ಹೊಂದಿಕೊಂಡಿದೆ.

ವಿವಿಧ ರೇಷ್ಮೆಹುಳುಗಳು ವರ್ಣತಂತುಗಳ ಸಂಖ್ಯೆ ಕಂಡುಬರುವ ಪ್ರದೇಶ

B. mandarina ೨ಟಿ= ೫೬ ಚೀನಾ

B. mandarina ೨ಟಿ=೫೪ ಜಪಾನ್

B. mori ೨ಟಿ= ೫೬ ಚೀನಾ, ಭಾರತ, ಜಪಾನ್ ಇತರೆ…

Antheraea pernyi ೨ಟಿ=೯೮ ಚೀನಾ

A. mylittai ೨ಟಿ=೬೨ ಭಾರತ

A. assamensis ೨ಟಿ=೩೦ ಭಾರತ

A. proylei ೨ಟಿ=೯೮ ಭಾರತ

A. roylei ೨ಟಿ=೬೨, ೬೦, ೬೪, ೬೮ ಭಾರತ

Samia cynthia ricini ೨ಟಿ= ೨೫-೨೮ ಭಾರತ

A. yamamai ೨ಟಿ= ೬೧ ಜಪಾನ್

ಅದರಂತೇಯೇ ಅಹಿಂಸಾ ರೇಷ್ಮೆ ಎನಿಸಿಕೊಳ್ಳುವ ಎರಿ ರೇಷ್ಮೆ Philosamia cynthia ricini Bosideval (೨ಟಿ=೨೫, ೨೮) ಕೂಡ ಬಹುತೇಕ ಅಸ್ಸಾಂನಲ್ಲಿ ತನ್ನ ಜೀವ ವೈವಿದ್ಯತೆಯನ್ನು ಹಬ್ಬಿಸಿಕೊಂಡಿದೆ. ಇತ್ತಿಚೀಗೆ ಬಿಹಾರ, ಪಶ್ಚಿಮಬಂಗಾಳ, ಮಣಿಪುರ, ಓರಿಸ್ಸಾ, ತ್ರಿಪುರ, ತಮಿಳುನಾಡುನಲ್ಲಿ ಕಾಣಿಸಿಕೊಂಡಿರುವುದು ಭಾರತೀಯ ಭೌಗೋಳಿಕ ಪ್ರದೇಶ ಎರಿ ರೇಷ್ಮೆಹುಳುವಿನ ಆಶ್ರಯತಾಣವಾಗಿದೆ (ವೆಲಯುದನ್ ೨೦೧೪).

ಈ ಮೇಲ್ಕಂಡ ಎಲ್ಲಾ ವೈಜ್ಞಾನಿಕ ಅಂಶಗಳನ್ನು ಸಂಕ್ಷಿಪ್ತವಾಗಿ ವ್ಯಾವಿಲೊ ಅವರ Center of origin ನ ವಿಷಯದ ಜೊತೆಗೆ ಹೊಲಿಕೆ ಮಾಡಿದಾಗ ಉಗಮಸ್ಥಾನಕ್ಕೆ ಬೇಕಾಗಬಹುದಾದ ಪ್ರಮುಖ ಅಂಶ ಅದರಲ್ಲಿಯ ವರ್ಣತಂತುಗಳ ಸಂಖ್ಯೆ ಕಡಿಮೆ ಇದ್ದು ಕ್ರಮೇಣ ವಿಕಾಸ ಹೊಂದಿರಬೇಕು. ಈ ನೆಲೆಗಟ್ಟಿನಲ್ಲಿ ಯೋಚನೆ ಮಾಡಿ ನೋಡಿದಾಗ B. mandarina (೨ಟಿ=೫೪) ಜಪಾನಿನಲ್ಲಿ ಕಂಡುಬರುವುದರಿಂದ ಹಿಪ್ಪುನೇರಳೆ ಉಗಮಸ್ಥಾನ ಜಪಾನಿನೆಡೆಗೆ ತಿರುಗುತ್ತದೆ. ಆದರೆ ವಿಕಾಸವಾದದಲ್ಲಿ ಯಾವುದೇ ಎರಡು ವಿಭಿನ್ನ ಭೌಗೋಳಿಕ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಪ್ರಭೇದವೊಂದು ಹುಟ್ಟಿ ವೈವಿದ್ಯತೆಗಳಿಸಿಕೊಳ್ಳಬಹುದು ಎಂಬ ನಂಬಿಕೆಯ ಅಡಿಗಲ್ಲಿನ ಮೇಲೆ ಯೊಚಿಸಿದಾಗ B. mandarina ಚೀನಾ ಮತ್ತು ಜಪಾನಿನಲ್ಲಿ ಒಂದೇ ಕಾಲಘಟ್ಟದಲ್ಲಿ ರೂಪತಳೆದಿರಬಹುದು ಎಂಬ ಒಂದು ಸತ್ಯ ಕೂಡ ಮುನ್ನೆಳಗೆ ಬರುತ್ತದೆ.

ಹಾಗಂತ ಯಾವುದೇ ಪ್ರಭೇದವೊಂದರ ಮೂಲಜನಲ್ಲಿ ಇರುವ ಕಡಿಮೆ ವರ್ಣತಂತುಗಳ ಸಂಖ್ಯೆಯಿಂದ ಹೆಚ್ಚಿನ ಸಂಖ್ಯೆಯ ವರ್ಣತಂತುಗಳಾಗಿ ವಿಕಾಸದ ಹಾದಿ ಸಾಗುತ್ತದೆ ಎಂಬ ಆಲೋಚನೆ ಎಲ್ಲಾ ಸಮಯದಲ್ಲಿ ಅನ್ವಯ ಅಗಬೇಕಂತ ಏನಿಲ್ಲ. ಯಾವುದೇ ಉಗಮಸ್ಥಳದಲ್ಲಿ ಮೈದಳೆದ ಪೂರ್ವಜರಲ್ಲಿಯ ವೈವಿದ್ಯತೆ ಹಾಗೂ ಜಿನೊಮಿಕ್ ಆವರ್ತನ (Genomic frequency) ಪೀಳಿಗೆಯಿಂದ ಪೀಳಿಗೆಗೆ ನಿರಂತವಾಗಿ ಸಾಗಿಬರುತ್ತದೆ. ಒಂದು ವೇಳೆ ಆ ಪ್ರಭೇದದ ಪೀಳಿಗೆಗಳು ಯಾವುದೇ ಅಡ್ಡಹಾಯುವಿಕೆಗೆ, ರೂಪಾಂತರ ಪರಿವರ್ತನೆಗೆ (Mutatoin), ವ್ಯತಿರಿಕ್ತ ಆಯ್ಕೆಗೆ (Selection)ಗೆ ಒಳಪಟ್ಟಾಗ ನಿರಂತರವಾಗಿ ಸಾಗಿಬರುವ ಜೀವತಂತುಗಳಲ್ಲಿ ಏರಿಳಿತ ಕಾಣಸಿಗುತ್ತದೆ (Hardy -Weinberg equilibrium ಸಿದ್ದಾಂತ). ಆದ್ದರಿಂದಲೇ ಜೀವವಿಕಾಸದ ಮೂಲದಲ್ಲಿ ಕಡಿಮೆ ವರ್ಣತಂತುಗಳು ಕ್ರಮೇಣ ವಿಕಾಸದ ಮಜುಲುಗಳನ್ನು ತುಳಿದ ಪೀಳಿಗೆಯಲ್ಲಿ ಹೆಚ್ಚು ಸಂಖ್ಯೆಯ ವರ್ಣತಂತುಗಳಾಗಿ ಕಾಣುವ ಉದಾಹರಣೆ ಕಂಡುಬರುತ್ತದೆ.

ಉದಾ: ಜಪಾನಿನ B. mandarina (೨ಟಿ=೫೪) ಇದ್ದದ್ದು, ವಿಕಾಸದ ಹಾದಿಯಲ್ಲಿ ಚೀನಾದಲ್ಲಿ B. mandarina ೨ಟಿ=೫೬ ಆಗಿ ಪರಿವರ್ತನೆ ಆಗಿರಬಹುದಲ್ಲವೇ.

ಅದೇ ರೀತಿ ಭಾರತೀಯ ಮೂಲದಲ್ಲಿ ಸಿಗುವ ಮೂಗ ರೇಷ್ಮೆ (೨ಟಿ=೩೦), ಟಸಾರ್ (೨ಟಿ=೬೨), ಎರಿ ರೇಷ್ಮೆ (೨ಟಿ= ೨೫, ೨೮) ಗಳನ್ನು ಗಮನಿಸಿದಾಗ ಅವುಗಳ ಪೂರ್ವಜರನ್ನು ಹುಡುಕುವ ಡಿ.ಎನ್.ಎ ಆಧಾರಿತ ಸಂಶೋಧನೆ ಆಗಬೇಕಾಗಿದೆ. ಯಾವುದೇ ಪ್ರಬೇಧವೊಂದರ ಉಗಮ ಸ್ಥಳದಲ್ಲಿ ಪ್ರಭೇದದ ಹೆಚ್ಚು ಸಂತತಿಗಳು ಕವಲುಗಳಾಗಿ ಬೆಳೆದಿರುತ್ತವೆ (Centre of Diversity) ಎಂಬ ವಿಷಯದಡಿ ನೋಡಿದಾಗ ಭಾರತದಲ್ಲಿ ಹಿಪ್ಪುನೇರಳೆ, ಮೂಗ, ಟಸ್ಟಾರ್ ಮತ್ತು ಎರಿಯ Ecoraceಗಳು ಹೇರಳವಾಗಿ ವೃದ್ಧಿಯಾಗಿರುವುದು ಕಂಡುಬರುತ್ತದೆ ಮತ್ತು ಭಾರತ ಈ ರೇಷ್ಮೆ Centre of Diversity ಎನ್ನುವುದರಲ್ಲಿ ಅನುಮಾನ ಇಲ್ಲ ಅನಿಸುತ್ತದೆ.

ಹೆಚ್ಚು ವರ್ಣತಂತುಗಳು ಇದ್ದಷ್ಟು (ಜೀನ್‌ಗಳು ಹೆಚ್ಚು) ವೈವಿದ್ಯತೆ ಹೆಚ್ಚಾಗುತ್ತಾ ಹೋಗುತ್ತದೆ ಅನ್ನುವ ವಿಜ್ಞಾನದ ಸತ್ಯವನ್ನು ಭಾರತೀಯ ನೆಲದಲ್ಲಿ ಸಿಗುವ ಎಲ್ಲಾ ರೇಷ್ಮೆಹುಳುಗಳ ವರ್ಣತಂತುಗಳನ್ನು ಕಂಡಾಗ ಭಾರತವು ರೇಷ್ಮೆಯ ವೈವಿದ್ಯತೆಯ ಸ್ಥಳ ಅಥವಾ ರೇಷ್ಮೆಯ ಉಗಮ ಸ್ಥಳ ಎಂಬ ಸುಳಿವು ನೀಡುತ್ತದೆ. ಈ ಹೇಳಿಕೆಗೆ ಅಡ್ಡಿಮಾಡುವ ವಿಜ್ಞಾನದ ಹೇಳಿಕೆ ಒಂದು ಇದೆ.

The Species with higher chromosomes possess large quantities of DNA with “Nonsense” sequence of nucleotide, having no additive value. This individual within the same species and related species separated geographically would show variable chromosome size (ಎಲ್ಲಾ ಸಮಯದಲ್ಲಿ ಜೀವಿಯಲ್ಲಿ ಹೆಚ್ಚು ವರ್ಣತಂತುಗಳಿದ್ದಾಗ ಆ ಜೀವಿ ಹೆಚ್ಚು ವೈವಿದ್ಯತೆಯನ್ನು ವ್ಯಕ್ತಪಡಿಸುತ್ತದೆ ಎನ್ನಲಾಗದು. ಕಾರಣ ಆ ಜೀವಿಯ ವರ್ಣತಂತುಗಳಲ್ಲಿ Non-Scene ನ್ಯೂಕ್ಲಿಯೊಟೈಡಗಳು ಇರಬಹುದು. ಇವುಗಳು ವರ್ಣತುಂತುಗಳಲ್ಲಿ ಕಂಡು ಬಂದರೂ ಯಾವುದೇ ಕೆಲಸಕ್ಕೆ ಬರದಂತೆ ಉಳಿದುಬಿಡುವುದಲ್ಲದೆ ಕೇವಲ ವರ್ಣ ತಂತುಗಳ ಸಂಖ್ಯೆ ಮತ್ತು ಗಾತ್ರದಲ್ಲಿ ಏರಿಳಿತ ಇರಬಹುದು). ಆದರೂ ಈ ವಿಜ್ಞಾನದ ಸತ್ಯ ಬಹುತೇಕ ಹೆಚ್ಚಿನ ಜೀವಿಗಳಲ್ಲಿ ಕಂಡುಬರುವುದಿಲ್ಲ ಅನ್ನುವುದು ಮೇಲೆ ಉಲ್ಲೇಖ ಮಾಡಿರುವ ವಿಷಯಕ್ಕೆ ಅಡ್ಡಿಯಾಗದು ಎಂದು ಭಾವಿಸಬಲ್ಲೆ.

ಪ್ರಸ್ತುತ ದಿನಮಾನಗಳವರೆಗೂ ಚೀನಾದಲ್ಲಿಯ B. mandarina, B. mori ಯ ರೂಪವಿಜ್ಞಾನ (Morphology) ಆಧಾರವಾಗಿಸಿಕೊಂಡು ಪ್ರಪಂಚದ ಇತರ ರಾಷ್ಟ್ರಗಳಲ್ಲಿ ಕಂಡುಬರುವ ರೇಷ್ಮೆಯನ್ನ ಚೀನಾದ ರೇಷ್ಮೆಗೆ ಹೊಲಿಸಿ ಉಗಮ ಹಾಗೂ ರೇಷ್ಮೆಯ ಹರಡಿದ ಹಾದಿಯ ವ್ಯಕ್ತಪಡಿಸುವ ಬದಲು Epigenetics ಬಗ್ಗೆ ಮಾತಾಡುತ್ತಿರುವ ಇವತ್ತಿನ ದಿನಮಾನಗಳಲ್ಲಿ ಡಿ.ಎನ್.ಎ. ಆಧಾರಿತ ಸಂಶೋಧನೆಗೆ ಒತ್ತು ನೀಡಬೇಕಾಗಿದೆ. ಇದು ಕೇವಲ ಹಿಪ್ಪುನೇರಳೆ ರೇಷ್ಮೆ ಬಗ್ಗೆ ಮಾತ್ರ ಚೀನಾದಲ್ಲಿ ಜರುಗಿವೆ. ಆದ್ದರಿಂದ ಹಿಪ್ಪುನೇರಳೆ ಮತ್ತು ಇತರೆ ರೇಷ್ಮೆಯ ಎಲ್ಲ ವಂಶವೃಕ್ಷಗಳನ್ನ ಪತ್ತೆಹಚ್ಚುವುದರಿಂದ ಸತ್ಯಾಂಶವನ್ನು ಹುಡುಕಲು ನೆರವಾಗುತ್ತದೆ.

ವಿಜ್ಞಾನದ ಆಲೋಚನೆಯ ಹಾದಿಯಲ್ಲಿ ನೋಡಿದಾಗ ಭಾರತವು ಇತರೆ ರೇಷ್ಮೆಯ ಉಗಮ ಸ್ಥಳ ಅಥವಾ ವೈವಿದ್ಯತೆಯ ಕೇಂದ್ರ ಎಂಬುದಕ್ಕೆ ಮೇಲಿನ ಚರ್ಚೆಗೆ ಒಳಪಟ್ಟ ವಿಷಯವೇ ಸಾಕ್ಷಿ. ಹಾಗೆಯೇ ಭಾರತೀಯ ನೆಲದಲ್ಲಿ ದಾಖಲಾಗಿರುವ ಚಾರಿತ್ರಿಕ ಪುಟಗಳನ್ನು ತಿರುವಿ ತಾಳೆ ಹಾಕಿದಾಗ ರೇಷ್ಮೆಭಾರತದಲ್ಲಿಯೇ ಉಗಮಿಸಿರಬೇಕು ಎನ್ನುವಷ್ಟು ಹೊಸ ಆಲೋಚನೆಗೆ ದಾರಿಮಾಡಿಕೊಡುತ್ತವೆ.

ಮಹಾಕಾವ್ಯಗಳಂತಿರುವ ರಾಮಯಣದಲ್ಲಿ ಅನೇಕ ಕಡೆ ರೇಷ್ಮೆಯ ಬಗ್ಗೆ ಉಲ್ಲೇಖವಿದೆ. ಆದರೆ ಇಲ್ಲಿ ಪ್ರಶ್ನೆ ರಾಮಾಯಣನಡೆದ ಕಾಲಘಟ್ಟ ಭಾರತೀಯ ಖಗೋಳಶಾಸ್ತ್ರದ ಲೆಕ್ಕಾಚಾರದಡಿ ಕ್ರಿ.ಪೂ. ೫೧೧೪ ಪುಶ್ಕರ್ ಭಟ್‌ನಗರ್- Dating the Era of Lord Rama ಅವರ ಸಂಶೋಧನೆಯ ಆಧಾರದಂತೆ ರಾಮಯಣದ ಕಾಲಘಟ್ಟ ಸರಿ ಸುಮಾರು ಕ್ರಿ.ಪೂ. ೫೦೦೦ ಅಂತ ನಂಬಿಕೆ ಹಾಗೂ ಇತ್ತೀಚೆಗೆ ಖ್ಯಾತ ಇತಿಹಾಸ ಸಂಶೋಧಕರಾದ ನೀಲೇಶ್ ನೀಲಕಂಠ ಓಕ್ ರವರೂ ಕೂಡ ಮರುಸಂಶೋಧನೆ ನಡೆಸಿ ಖಗೋಳಶಾಸ್ತ್ರ, ಕಾರ್ಬನ್ ಡೇಟಿಂಗ್, ಭೂ ವಿಜ್ಞಾನ ಆಧಾರವಾಗಿಸಿಕೊಂಡು ಭಾರತದಲ್ಲಿ ರಾಮಾಯಣ ನಡೆದ ಕಾಲಘಟ್ಟ ಕ್ರಿ.ಪೂ ೧೨೦೦೦ ಹಾಗೂ ಮಹಾಭಾರತ ಗತಿಸಿದ ಕಾಲಘಟ್ಟ ಕ್ರಿ.ಪೂ. ೫೦೦೦ ವರ್ಷಗಳ ಹಿಂದೆ ಎಂದು ತಮ್ಮ ಸಂಶೋಧನೆಯನ್ನ ಮಂಡಿಸಿದ್ದಾರೆ (ಸೂಚನೆ: ಮುಂದಿನ ದಿನಗಳಲ್ಲಿ ವಿಮರ್ಶೆಗೆ ಒಳಪಡಬೇಕಾಗಿರುವ ವಿಚಾರವಾಗಿದೆ).

ಆದರೆ ಇಲ್ಲಿರುವ ಕೌತುಕವೆಂದರೆ ಯಾವುದೇ ರಾಮಾಯಣ ಅಥವಾ ಮಹಾಭಾರತ ಕಾಲಘಟ್ಟ ತೆಗೆದುಕೊಂಡು ತೂಗಿದರೆ ಕನಿಷ್ಠ ೫೦೦೦ ಕ್ರಿ.ಪೂ. ಹಿಂದೆಯೇ ನಡೆದಿದೆ. ಚೀನಾದಲ್ಲಿ ರೇಷ್ಮೆಕೃಷಿ ಬೆಳಕಿಗೆ ಬಂದಿದ್ದು ಕೇವಲ ಕ್ರಿ.ಪೂ. ೨೦೦೦ ವರ್ಷಗಳ ಹಿಂದೆ, ಅಂದರೆ ಇಂದಿಗೆ ಒಟ್ಟು ೪೦೦೦ ವರ್ಷ. ಚೀನಾದಲ್ಲಿ ರೇಷ್ಮೆ ಬೆಳಕಿಗೆ ಬರುವುದಕ್ಕೂ ಮುಂಚೆ ಭಾರತದಲ್ಲಿ ನಡೆದಿದೆ ಎನ್ನಲಾದ ರಾಮಾಯಣ ಮತ್ತು ಮಹಾಭಾರತದಲ್ಲಿ ರೇಷ್ಮೆವಸ್ತ್ರದ ಬಗ್ಗೆ ಉಲ್ಲೇಖವಿರುವಾಗ ರೇಷ್ಮೆ ಮೊದಲು ಬೆಳಕಿಗೆ ಬಂದದು ಭಾರತದಲ್ಲಿ ಹಾಗೂ ಕೇವಲ ರೇಷ್ಮೆ ಸಾಕಣಿಕೆಯಲ್ಲದೆ ನೂಲುಬಿಚ್ಚಾಣಿಕೆ ತಂತ್ರಜ್ಞಾನವೂ ಭಾರತೀಯರಿಗೆ ಗೊತ್ತಿತ್ತು ಅನಿಸುವುದಲ್ಲವೆ?

Harappa Archeological Research Project (HARP) ಅಡಿಯಲ್ಲಿ ಜರುಗಿದ ಸಂಶೋಧನೆಯಲ್ಲಿ ಬೆಳಕಿಗೆ ಬಂದ ಭಾರತೀಯ ಮೂಲದ ಟಸ್ಸಾರ್ Antheraea mylitta ರೇಷ್ಮೆಬ್ರೀನ್

ಅಷ್ಟೇ ಅಲ್ಲದೆ ಪ್ರಪಂಚವೇ ನಂಬಿರುವ ಹರಪ್ಪನಾಗರೀಕತೆಯು ಕಾಲಘಟ್ಟ ಕ್ರಿ.ಪೂ. ೧೯೦೦- ೩೦೦೦ ವರ್ಷಗಳ ಹಿಂದೆ ನಡೆದಿದೆ ಎಂದು ನಂಬಲಾಗಿದೆ. ಭಾರತೀಯರು ರೋಚಕತೆಯಿಂದ ಕಣ್ಣು ಹುಬ್ಬೇರಿಸುವಂತೆ ಮಾಡುವ ಕೌತುಕ ವಿಚಾರವೆಂದರೆ Harappa Archeological Research Project (HARP) ದಿಂದ ಹೊರಬಂದ ವಿಚಾರದಲ್ಲಿ ಭಾರತೀಯ ಮೂಲದ ಟಸಾರ್ Antheraea mylitta ರೇಷ್ಮೆಯಿಂದ ಮಾಡಲ್ಪಟ್ಟಿದ ರೇಷ್ಮೆಯ Chanhvdaro Silkನ ಪಳಯುಳಿಕೆಗಳು ಕಂಡುಬಂದಿದೆ (Nature ಪತ್ರಿಕೆಯಲ್ಲಿ ಪ್ರಕಟ) ಎಂಬ ವಿಷಯ ಯೋಚನೆಗೆ ಹಚ್ಚುತ್ತದೆ. ಅಂದರೆ ಚೀನಾಕ್ಕಿಂತಲೂ ಮುಂಚೆ ಭಾರತೀಯರು ರೇಷ್ಮೆಸಾಕಾಣಿಕೆ ಅಲ್ಲದೆ ನೂಲುಬಿಚ್ಚಾಣಿಕೆ ತಂತ್ರಜ್ಞಾನ ಬಲ್ಲವರಾಗಿದ್ದರು ಎಂಬ ಕೌತುಕಮಯ ವಿಷಯ ಹೊರಬರುವಂತೆ ಮಾಡುತ್ತದೆ.

ಅಂದು ನನ್ನ ವಿದ್ಯಾರ್ಥಿ ಆದರ್ಶ್ ಹೇಳಿದಂತೆ ಸೀತಾ ಟಸ್ಸಾರ್ ತೊಟ್ಟಿರಲಿ, ತೊಡದೆ ಇರಲಿ ಆದರೆ HARPPÀ ನ ಅಡಿಯಲ್ಲಿ ಹೊರಬಿದ್ದ ಟಸ್ಸಾರ್ ರೇಷ್ಮೆಹುಳುವಿನ Antheraea mylitta ನೂಲು ಬಹುತೇಕ ಅವನ ಹೇಳಿಕೆಗೆ ಪುಷ್ಠಿನೀಡುವಂತ್ತಿತ್ತು. ಕಲಿಯುವುದು ಬಹಳಷ್ಟಿದೆ ಎಂಬುದಕ್ಕೆ ನನ್ನ ವಿದ್ಯಾರ್ಥಿ ಕೊಟ್ಟ ಒಂದು ಸುಳಿವು ಹಿಡಿದು ಜೀವವಿಕಾಸದ ಜರಡಿಯಲ್ಲಿ, ಆಧುನಿಕ ಸಂಶೋಧನೆಯ ತಿರುಳಿನಲ್ಲಿ ಈ ಲೇಖನವನ್ನು ನೋಡುತ್ತಾ ಹೋದಾಗ ಭಾರತ ರೇಷ್ಮೆಕೃಷಿಯ ಉಗಮ/ ವೈವಿದ್ಯತೆಯ ಸ್ಥಳವೆನಿಸುತ್ತದೆ.

ನಾನು ಈಗಾಗಲೇ ಆರಂಭದಲ್ಲಿ ಹೇಳಿರುವಂತೆ ವಿಜ್ಞಾನದಲ್ಲಿ ಕ್ರಾಂತಿಸೃಷ್ಟಿಸಿದ ಡಾರ್ವಿನ್ ಹಾಗೂ ರುಸ್ಸೆಲ್ಲರ ಜೀವವಿಕಾಸ ಸಿದ್ದಾಂತವನ್ನು ಜನರಿಗೆ ಮನದಟ್ಟು ಮಾಡಲು ನಿಯೋ ಡಾರ್ವಿನಿಸಂ ಯುಗದ ಪ್ರವರ್ತಕ ಮೆಂಡಲರು, ಸ್ಟ್ರಾನ್ಸ್ ಬರ್ಗರ್ ಹಾಗೂ ವಾಟ್ಸನ್ ಕ್ರಿಕರು ಬರಬೇಕಾಯಿತು. ವಾಸ್ತವ ಸತ್ಯವನ್ನು ಜೀರ್ಣಿಸಿಕೊಳ್ಳಲು ಸಮಯವೇ ಬೇಕಾಗುತ್ತದೆ ಅದೇ ರೀತಿ ಭಾರತದ ನೆಲೆಯಲ್ಲಿ ಹಿಪ್ಪುನೇರಳೆ, ಮೂಗ, ಎರಿ ಮತ್ತು ಟಸ್ಟಾರ್ ಅಂತಹ ರೇಷ್ಮೆಹುಳುಗಳ ವೈವಿದ್ಯತೆ ಹೆರಳವಾಗಿರುವುದಲ್ಲದೆ ಚೀನಾದಲ್ಲಿಯ ರೇಷ್ಮೆಸಾಕಾಣಿಕೆಯು ಕಣ್‌ತೆರೆಯುವ ೪೦೦೦ವರ್ಷಗಳ ಮುನ್ನವೇ ಭಾರತೀಯ ನೆಲದಲ್ಲಿ ರೇಷ್ಮೆಬಗ್ಗೆಯ ಉಲ್ಲೇಖ ನೀಡುವ ಜ್ಞಾನ ವಿಜ್ಞಾನದ ಉಲ್ಲೇಖಗಳು ಭಾರತವನ್ನು ರೇಷ್ಮೆಯ ವೈವಿದ್ಯತೆಯ ಸ್ಥಳ ಅಥವಾ ಉಗಮ ಸ್ಥಳ ಎನ್ನುವ ಪುಷ್ಟಿ ನೀಡುತ್ತದೆ ಎಂಬ ಸತ್ಯ ಅರಿತು ನಂಬಲು ನಿಯೋಡಾರ್ವಿನ್ ಕಾಲದ ವಿಜ್ಞಾನಿಗಳಂತೆ ಇಂದಿನ ವಿಜ್ಞಾನಿಗಳು ಮರುಸಂಶೋಧನೆ ಕೈಗೊಳ್ಳಬೇಕಾಗಿದೆ.

‍ಲೇಖಕರು Admin

November 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: