ರಾಜಕೀಯ ಕುಸಿಯಲಿದೆಯೆಂದಾಗೆಲ್ಲ ಸಾಹಿತ್ಯ ಅದನ್ನು ತಡೆಯುತ್ತದೆ..

ಹಸನ್ ನಯೀಮ್ ಸುರಕೋಡ 

ಇದು ೧೯೫೫ರ ಮಾತು.

ದೆಹಲಿಯ ಕೆಂಪುಕೋಟೆಯಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಅಂದಿನ ಪ್ರಧಾನಿ ಜವಾಹರಲಾಲ ನೆಹರೂ ಮುಖ್ಯ ಅತಿಥಿಯಾಗಿದ್ದರು.

ಸಂಪ್ರದಾಯದಂತೆ ಹಿಂದಿಯ ರಾಷ್ಟ್ರಕವಿ ರಾಮಧಾರಿಸಿಂಹ ದಿನಕರ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆ ಹತ್ತುವಾಗ ನೆಹರೂ ಜೋಲಿ ತಪ್ಪಿ ಇನ್ನೇನು ಕೆಳಗೆ ಬೀಳಲಿದ್ದರು.

ಅಷ್ಟರಲ್ಲಿ ಅವರ ಹಿಂದೆಯೆ ಇದ್ದ ಕವಿ ದಿನಕರ ಅವರನ್ನು ಬೀಳದಂತೆ ಹಿಡಿದುಕೊಂಡರು.

ವೇದಿಕೆ ಮೇಲೆ ಕುಳಿತುಕೊಂಡ ಮೇಲೆ ಪ್ರಧಾನಿ ‘ಧನ್ಯವಾದ ಕವಿಗಳೇ. ತಾವು ನನ್ನನ್ನು ಹಿಡಿದುಕೊಂಡಿರದಿದ್ದರೆ ನಾನು ಬಿದ್ದೇ ಬಿಡುತ್ತಿದ್ದೆ.’ ಎಂದರು.

‘ಅದಕ್ಕೇಕೆ ಧನ್ಯವಾದ ಹೇಳುವಿರಿ ಪಂಡಿತಜೀ. ರಾಜಕೀಯ ಕುಸಿಯಲಿದೆಯೆಂದಾಗೆಲ್ಲ ಸಾಹಿತ್ಯ ಅದನ್ನು ತಡೆಯುತ್ತದೆ, ತಡೆಯಬೇಕು ಅಷ್ಟೇ.’ ಎಂದರಂತೆ ಆ ಮಹಾಕವಿ ದಿನಕರಜೀ.

ಆ ರಾಜಕಾರಣಿ ಆ ಸಾಹಿತಿಗಳ ಕಾಲವೊಂದಿತ್ತು ಎಂಬುದು ಹಳವಂಡ ಮಾತ್ರವಾಗಬಾರದು, ಅಲ್ಲವೆ?

‍ಲೇಖಕರು avadhi

July 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasundhara K M

    ಅಸೂಕ್ಮತೆಯ ಕಾಲಮಾನವಿದು. ಹಾಸ್ಯ, ವಿಡಂಬನೆಗಳು ಮೊನಚು ಕಳೆದುಕೊಳ್ಳುತ್ತಿವೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: