ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಘವೇಂದ್ರ ಜೋಷಿ ಕವಿತೆ: ಲೈಫು ಇಷ್ಟೇನಾ ಪುರಂದರ ವಿಠಲ

“ಕೃಪಯಾ ಬ್ಯಾಂಗಲೋರ್ ಕೋ

ಜಾನೇವಾಲೇ ಪ್ಯಾಸೆಂಜರ್ಸ್..”

ಹೈತಾಪೂರವೆಂಬ

ಕುಗ್ರಾಸ ಹಳ್ಳಿಗೂ

ದೆಹಲಿಯ

ನಿಜಾಮುದ್ದೀನ ಸ್ಟೇಶನ್ನಿಗೂ

ಭಾರತೀಯ ರೈಲ್ವೇದು

ಒಂದೇ ರೀತಿಯ ಸೇವೆ:

ಒಂದೇ ಧ್ವನಿ

ಒಂದೇ ಏರಿಳಿತ.

ಮಿಕ್ಕಂತೆ

ಎಲ್ಲಾ differs.

ಎಲ್ಲಾ matters.

ಬರೀ ಕುಡುಗೋಲು

ಮತ್ತು ಸಿಟ್ಟಿಗೆ

ರೂಪಕವಾಗಿದ್ದ ‘ಕೆಂಪು’ ಬಣ್ಣ

ಕಿಂಗ್ ಫಿಷರ್

ವಿಮಾನದಲ್ಲಿ ಮಾತ್ರ

ತಾನೇ ತಾನಾಗಿ

ಅಮಲೇರಿಸಿಕೊಂಡು

ಕರಗಿದ್ದಂತೂ ಸತ್ಯ.

ಎಲ್ಲೂ ಸಿಟ್ಟಿಲ್ಲ

ಸಿಡುಕಿಲ್ಲ.

ರೈಲಿನಲ್ಲಿ ಕುಳಿತ ಮದುಮಗಳಿಗೆ

ಅಂಗೈಯಲ್ಲಿನ ಮೆಹಂದಿ

ಯಾಕೆ ಕೆಂಪೇರಿಲ್ಲ

ಅನ್ನುವ ಚಿಂತೆ.

ವಿಮಾನದಲ್ಲಿ ಹುರಿದ ಮೀನು

ತಿನ್ನುತ್ತಿರುವ ಮದುಮಗನಿಗೆ

ಎಂದೋ ನೋಡಿದ್ದ

ಯಾರದೋ

ಮೀನಖಂಡದ ಚಿಂತೆ.

ತೊಟ್ಟ ಬಾಣವ

ಮತ್ತೇ ತೊಡಬಾರದಂತೆ!

ಮೇಲಿರುವವನು ಜಾಣ ಕಣ್ರೀ,

ತುಂಟ ಗಾಳಿ

ಸೃಷ್ಟಿಸುವವನೂ ಅವನೇ

ತೊಟ್ಟ ಫ್ರಾಕು

ಹಾರಿಸುವವನೂ ಅವನೇ

ಮತ್ತು

ಇದನ್ನೆಲ್ಲ ನೋಡಬಯಸಿದ

ನೂರಾರು ಕಣ್ಣುಗಳಲ್ಲಿ

ಧೂಳು ಚಿಮುಕಿಸುವವನೂ ಅವನೇ.

ಯಾರಿಗೆ

ಯಾರು ಬೇಲಿ?

ಯಾರಿಗೆ ಯಾರೋ

ಪುರಂದರ ವಿಠಲ!

 

‍ಲೇಖಕರು G

25 April, 2011

2 Comments

  1. dattathri

    very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading