ಈ ಸಾಲಿನ ರಾಜ್ಯ ಮಟ್ಟದ ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿಗೆ ಯುವ ಕವಿ, ಪತ್ರಕರ್ತ ರವಿ ಕುಮಾರ್ ಟೆಲೆಕ್ಸ್ ಅವರು ಆಯ್ಕೆಯಾಗಿದ್ದಾರೆ
ಅವರ ಮೊದಲ ಸಂಕಲನ ‘ನಂಜಿಲ್ಲದ ಪದಗಳು’ ಕೃತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೈಸೂರಿನ ಕಲಾ ಮಂದಿರದ ಕಿರು ಸಭಾಂಗಣದಲ್ಲಿ ಜೂನ್ ೨ರಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ ೧೦ ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ ಎಂದು ಈ ಪ್ರಶಸ್ತಿ ಸ್ಥಾಪನೆ ಮಾಡಿರುವ ‘ರಂಗವಾಹಿನಿ’ ತಂಡದ ಅಧ್ಯಕ್ಷ ಸಿ ಎಂ ನರಸಿಂಹಮೂರ್ತಿ ಅವರು ತಿಳಿಸಿದ್ದಾರೆ.
ಅಭಿನಂದನೆಗಳು…. ನಿಮ್ಮ ಕವನ ಸಂಕಲನ ಓದಿರುವೆ.ಪ್ರತಿ ಕವನದಲ್ಲೂ ಒಂದೊಂದು ಅಂತರಾಳವಿದೆ. ಪ್ರಶಸ್ತಿಗೆ ಒಳ್ಳೆಯ ಕೃತಿ ಯ ಆಯ್ಕೆಯಾಗಿದೆ…ಮತ್ತೊಮ್ಮೆ ಅಭಿನಂದನೆಗಳು ಸರ್…