ಭಿನ್ನ-ಸಾಮಾನ್ಯ (queer) ಪ್ರೇಮಕ್ಕೆ ಒಂದು ಹೃದಯಪೂರ್ವಕ ಸಮರ್ಪಣೆ. ಕಾರಣಾಂತರಗಳಿಂದ, ಪೂರ್ವಕಲ್ಪಿತ ಭಾವನೆಗಳಿಂದ ದೂರ ಸರಿದಿರುವ ಮನಸ್ಸುಗಳನ್ನು ಮತ್ತೆ ಹತ್ತಿರ ತರುವಲ್ಲಿ ಅಂತಃಕರಣ, ಸಕಾರಾತ್ಮಕ ಸಂಭಾಷಣೆ ಮತ್ತು ಸ್ಪಂದನೆಗಳ ಶಕ್ತಿ ಮತ್ತು ಉಪಯುಕ್ತತೆ ಬಗ್ಗೆ ಈ ನಾಟಕ ಚಿಂತಿಸುತ್ತದೆ. ಕಥಾ ಹಂದರವು ಮನುಷ್ಯ ಸಹಜವಾದ ಎಲ್ಲಾ ಭಾವನೆಗಳನ್ನೂ, ಆಸೆ- ನಿರಾಶೆಗಳನ್ನೂ ಮುಕ್ತವಾಗಿ, ಹಾಸ್ಯದ ಮೂಲಕ ತೆರೆದಿಡುತ್ತದೆ. ಪಾತ್ರಗಳು ಒಂದನ್ನೊಂದು ಪ್ರಶ್ನಿಸುತ್ತಾ, ತನ್ಮೂಲಕ ಅರ್ಥಮಾಡಿಕೊಳ್ಳುತ್ತಾ ಹೋದಾಗ, ಸಹಾನುಭೂತಿ ಮತ್ತು ಗೌರವದ ಬಾಗಿಲುಗಳು ತೆರೆದುಕೊಳ್ಳುತ್ತದೆ.
ಲೈಂಗಿಕ ಅಸ್ಮಿತೆ, ಜಾತಿ, ಮತಗಳನ್ನೂ ಮೀರಿ. ಪ್ರೀತಿ-ನೋವು ಮುಂತಾದ ಮುಗ್ಧ ಮನುಷ್ಯ ಭಾವನೆಗಳು ಎಲ್ಲರಲ್ಲೂ ಒಂದಾಗೇ ಮಿಡಿಯುತ್ತಿರುತ್ತದೆ ಎನ್ನುವುದೇ ಈ ನಾಟಕದ ಮೂಲ ಸೆಲೆಯಾಗಿರುತ್ತದೆ. ಒಂದು ಅಂತರ್ಮತೀಯ ಭಿನ್ನ-ಸಾಮಾಮನ್ಯ ಜೋಡಿ ಮತ್ತು ಅವರಲ್ಲೊಬ್ಬರ ಅಮ್ಮ ಭೇಟಿಯಾದಾಗ ಉಂಟಾಗುವ ಸನ್ನಿವೇಷ, ತದನಂತರ ಅವರ ಸಂಬಂಧದ ಯಾನದಲ್ಲಿ ಅವರೆಲ್ಗರೂ ತಮ್ಮ ಭೂತಕಾಲದ ಹೊರೆಗಳನ್ನೆಲ್ಲಾ ಕಳಚಿಡುತ್ತಾ, ಅಂತಃಕರಣಗಳನ್ನು ತೆರೆದುಕೊಳ್ಳುತ್ತಾ ಪ್ರೀತಿ, ಒಪ್ಪಿಗೆ ಮತ್ತು ದ್ವೇಶದ ಒಳ ಹಂದರಗಳನ್ನು ದಾಟುತ್ತಾ, ತಮ್ಮನ್ನು ತಾವೇ ಹೊಸ ಬೆಳಕಿನಲ್ಲಿ ಕಂಡುಕೊಳ್ಳುತ್ತಾ ಹೋಗುತ್ತಾರೆ.
ರಚನೆ-ನಿರ್ದೇಶನ – ಸಂಗೀತ : ಕಾರ್ತಿಕ್ ಹೆಬ್ಬಾರ್
ಪಾತ್ರ ವರ್ಗ: ಡಾ. ಸೀತಾ ಕೋಟೆ, ಬಿ ವಿ ಶೃಂಗ, ಅರುಣ್ ಡಿ ಟಿ.
ಬೆಳಕು: ಎಂ ಜಿ ನವೀನ್
ತಂಡ ನಿರ್ವಹಣೆ: ಮುರಳಿ ಶ್ರೀರಾಮ್
0 ಪ್ರತಿಕ್ರಿಯೆಗಳು