ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುದ್ದ ಮಾಡಿಬಿಡಿ..

chalam

ಚಲಂ ಹಾಡ್ಲಹಳ್ಳಿ 

ಯುದ್ದ ಮಾಡಿಬಿಡಿ
ರಾಜನ ಪೋಷಾಕು ಧರಿಸಿ
ದೇಶದ ಬೀದಿ ಬೀದಿಯಲಿ
ಸುತ್ತಿಬಿಡಿ..

against-warಗಡಿಯಲ್ಲಿ ನನ್ನ
ಸಹೋದರರು ಸಾಯುತ್ತಿರಲಿ
ಹುತಾತ್ಮ ಅಂತ ಬೋರ್ಡು
ಬರೆಸಿಕೊಂಡು
ನೇತು ಹಾಕಲು
ಸರ್ಕಲ್ಲಿನಲ್ಲಿ ಕುಳಿತುಬಿಡಿ

ಏನೂ ಅರಿಯದ ಕೂಸು..
ತಾಯಿಯ ರೋದನೆ..
ಮುದ್ದು ಹೆಂಡತಿಯ ನಿಟ್ಟುಸಿರು
ಆಯಾ ಮನೆಯಲ್ಲಿ ಕರಗಿ ಹೋಗುತ್ತವೆ..
ನೀವು ಯುದ್ದ ಮಾಡಿಬಿಡಿ

ಮಾತುಗಳು ಜನರಲ್ಲಿ
ನಂಬಿಕೆ ಹುಟ್ಟಿಸಲು
ಸೋತು ಹೋದಾಗ
ಬಾಂಬು,ಮಿಸೈಲುಗಳ
ಮೂಲಕ ಜನರನ್ನು ನಂಬಿಸಲು
ಹೊರಟಿದ್ಧೀರಿ..
ನೀವು ದೇಶಭಕ್ತರೆಂಬುದು ಸಾಭೀತಾಗಲು
ಗಡಿಯಲ್ಲಿ ಯಾವುದೋ
ಯೋಧನ ರಕ್ತ ಹರಿಯಲೇಬೇಕು
ನೆತ್ತರಿನ ವಾಸನೆಯ
ಗಲ್ಲಿ ಗಲ್ಲಿಗಳಲ್ಲಿ ಹರಡಿಬಿಡಿ
ದೇಶ ಭಕ್ತಿಯೂ
ರಸ್ತೆ ರಸ್ತೆಗಳಲ್ಲಿ ಚೆಲ್ಲಾಡಲಿ
ನೀವು ಯುದ್ದ ಮಾಡಿಬಿಡಿ

ಶಾಂತಿಯ ಬಗ್ಗೆ
ಮಾತನಾಡಿದವನನ್ನು
ದೇಶದೊಳಗೇ ಗಡಿಪಾರು
ಮಾಡಿಬಿಡಿ..
ನಿಮ್ಮ ರಾಜ ಪೋಷಾಕಿಗೆ
ನನ್ನ ಸಹೋದರರ
ರಕ್ತದ ಕಲೆಯು ಚಿಮ್ಮದಿದ್ದರೆ
ಬಹುಪರಾಕುಗಳು
ಅರ್ಥ ಕಳೆದುಕೊಳ್ಳುತ್ತವೆ

ರಕ್ತ ಒಳಗಿದ್ದರೆ ಜೀವ
ಹೊರ ಬಂದರೆ ನಾಶವಲ್ಲದಿದ್ದರೆ
ಯುದ್ದ ಮಾಡಿಬಿಡಿ

‍ಲೇಖಕರು Admin

30 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading