ಯಾರಾದರೂ ಕದ್ದು ಬಿಡಿ ನನ್ನ ಕನಸನ್ನು..

ಗೀರ್ವಾಣಿ

ಇದು ಯಾರ ಶಾಪಕ್ಕೆ ಹುಟ್ಟಿಕೊಂಡ ಕನಸು?
ಆಲದ ಮರದ ಕೆಳಗೆ
ಬೆಳೆದು ಹಣ್ಣು ಹಡೆಯುವ ಕನಸು

chessಸಂಭೋಗದಾಚೆ ಚಿಗುತೇರುತ್ತಲೇ ಇಲ್ಲ
ಸಂಭವಗಳು
ಕುಮಾರ ಸಂಭವ
ಕುಮಾರಿ ಸಂಭವ!

ಯಾರಿತ್ತ ಶಾಪವೋ
ಯಾರ ಕೋಪವೋ
ಯಾರಾದರೂ ಕದ್ದು ಬಿಡಿ ನನ್ನ ಕನಸನ್ನು

ಹಚ್ಚಡದ ಬೆಳಕು ಆರಿಸಿ ಬಿಡುತ್ತೇನೆ
ಹೆಬ್ಬಾಗಿಲ ತೆರೆದಿಡುತ್ತೇನೆ
ಸದ್ದಿಗೆ ಕಿವುಡಾಗುತ್ತೇನೆ
ಯಾರಾದರೂ ಕನ್ನ ಹೊಡೆಯಬಾರದೆ?

ಉಚಿತವಾದರೂ ಸೈ
ಎಂಟಾಣೆ ಕೊಟ್ಟರೂ ಸೈ
ಕೊನೆಗೆ ಹೆಡೆ ಮುರಿ ಕಟ್ಟಿದರೂ ಸೈ
ಕದ್ದು ಬಿಡಿ ಈ ಕನಸನ್ನು

ಸ್ಖಲನಗಳಿಗೆ ಕಾದಿದ್ದಷ್ಟೇ ಬಂತು
ಕೆನ್ನೀರ ಪ್ರವಾಹಗಳು ನಿಲ್ಲಲಿಲ್ಲ
ಅಮೂರ್ತಗಳು ಮೂರ್ತವಾಗಲೇ ಇಲ್ಲ
ಕಳ್ಳಗಿಂಡಿ ತೆರೆದರೂ ಹೊರ ಹೋಗುತ್ತಿಲ್ಲ
ಯಾರಾದರೂ ಕದಿಯಬಾರದೆ ಕನಸನ್ನು
ಬಿದಿರು ಮೆಳೆಗಳಿಗೆ ವಾಪಸ್ ಕೊಟ್ಟುಬಿಡಿ ಕೊಳಲನ್ನು
ಕೊಳಲ ನಾದವನ್ನು !

‍ಲೇಖಕರು Admin

July 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: