ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರದೊ ಆಸೆಗೆ ನೀರೆರೆದು ಬಯಸದ ಗಿಡ ಮರವಾಗಿದ್ದು..

ಐವತ್ತಾಯಿತು..

– ನಾಗೇಶ ಮೈಸೂರು

ನನಗೂ ನಿನಗೂ –
ಐವತ್ತಾಯಿತು ನೋಡು..
ಸಾಕಿನ್ನು ಏಗಿದ್ದು, ಮಾಗಿದ್ದು
ಬಾ ಬದುಕೋಣ, ನಮಗಾಗಿ..||
 
ನೋಡು ನೆನಪಲಿ ಹಸಿರು
ಓದಿ ಬರೆದು ಬೆಳೆದದ್ದು
ಯಾರದೊ ಆಸೆಗೆ ನೀರೆರೆದು
ಬಯಸದ ಗಿಡ ಮರವಾಗಿದ್ದು ||
 
ಬೇಕಿತ್ತೊ, ಬೇಡಿತ್ತೊ ಬಿಡು
ಮರವಾಗಿದ್ದಾಯ್ತು ಸಫಲ
ಹೂಬಿಟ್ಟು ಹಣ್ಣಾಗಿ ಸಂಕುಲ
ಪೀಳಿಗೆ ಪರಂಪರೆ ಜಾಲ ||
 
ಹಾಳು ಪ್ರಾಯವೆಲ್ಲ ನಿರತ
ನೆರಳಾಗುತ ತಾಯಾಗುತ ಸತತ
ಹುಮ್ಮಸ್ಸಲಿ ಎದೆ ತುಟಿ ಬಿಗಿದು
ದಣಿದಿದ್ದು ಐವ್ವತ್ತರ ಬೆವರಲಿ ||
 
ಯಾರಿಗೆ ಗೊತ್ತು ಸರಾಸರಿ?
ಹುಟ್ಟು ಸಾವ ಗೋರಿಯ ಕೊಸರು
ಬಿಟ್ಟೆಲ್ಲ ಬಂದುಬಿಡಿನ್ನು ತೊದಲದೆ
ಬದುಕೋಣ ನಮಗಾಗಿ ಕದಲದೆ ||
 

‍ಲೇಖಕರು G

17 February, 2015

3 Comments

  1. ಅಕ್ಕಿಮಂಗಲ ಮಂಜುನಾಥ

    ತುಂ ತುಂ ತುಂಬಾ ಚೆನ್ನಾಗಿದೆ.

  2. mavi

    ಅಮಿತ ಪ್ರೀತ ಗಿರೀಶ
    ಭಾವಗೀತೆಯ ಮಹೇಶ
    ಭಾವ ವಾಗ್ವೈಕರಿಯ ಶ್ರೀಮಂತ
    ಲಲಿತ ಲವಗುಣ ಚೆನ್ನ ಚಲಿತ
    ಅತಿತ ಸುಂದರ ಕವನ ರಚಿತ!
    – ವಿಜಯಶೀಲ ೧೭.೦೨.೧೫

  3. mmshaik

    kavite chennaagide sir…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading