ಯಾಕಿಂಗ ಕಾಡತಿ ಮನದಾಗ..

ಜಯಶ್ರೀ ಭ ಭಂಡಾರಿ /ಬಾದಾಮಿ

ಯಾಕೀ ಮೌನ…..
ಸರಿದಾರಿಗೆ ಬಾರೋ ಸರದಾರ
ಸಾಕಾಗೇದ ನಿನ್ನ ಮೌನಧಾರ
ಯಾಕಿಂಗ ಕಾಡತಿ ಮನದಾಗ
ಸರಸರ ಬರತಿದ್ದಿ ಸರಸಕ ಕರೆದಾಗ

ಆದದ್ದೆಲ್ಲ ಮರತ ಆಗುದ ನೋಡ
ನಿನ್ನ ಬಿಟ್ಟ ಇರಾಕ ನೀಗಂಗಿಲ್ಲ ಬಿಡ
ಜೋಡಿ ಜೀವ ಅಗಲಿದರ ಏನ ಚಂದ
ನೋಡದವರ ಏನಂದಾರ ತಿಳದ ನೋಡ

ಹೆಜ್ಯಾಗ ಹೆಜ್ಜಿ ಇಟ್ಟಬಂದಾಕಿ
ನೀ ಉಂಡ ಎಲ್ಯಾಗ ಉಂಡಾಕಿ
ಕಷ್ಟ ಸುಖದಾಗ ನಿನ್ನ ಜೊತೆಯಾದಾಕಿ
ಸರಸದಲ್ಲಿ ಸಾಟಿಯಿಲ್ಲದವನೆ ನಾ ನಿನ್ನಾಕಿ.

 

ಬರೋ ಹುಣ್ಣಿಮೆಗೆ ತಿಂಗಳಾತು
ತಿಂಗಳ ಬೆಳಕ ತಂಗಳಾತು
ಬ್ಯಾಸರ ಬಂದದ ನೀನಿಲ್ದದ ಅಂಗಳ
ಎಂದು ಬರುವೆ ರಾಯ ಕಾಯ್ತಿವೆ ಕಂಗಳ

ಮಲ್ಲೆಮುಡಿದು ಬಹಳ ದಿನವಾತು
ಲಲ್ಲೆಗರೆಯುವ ಸಮಯ ಬಂದಾತು
ತಣಿಸುಬಾ ರಸಿಕನೆ ಮನದನ್ನೆಯ
ಹರುಷದಿ ಸರಸದಿ ಸೇರುವ ಬಾ
ಜೊನ್ನಹನಿಯಾಗಿ

‍ಲೇಖಕರು avadhi

June 6, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: