ಎಂ ಎಸ್ ಮೂರ್ತಿ ಆಷಾಡದಲ್ಲಿ ಇನ್ನೂ ಕಾಲಿಡದ ಮಳೆಯ ಬಗ್ಗೆ ಬರೆದಿದ್ದರು. ಅದಕ್ಕೆ ಕ್ಯಾಮರೂನ್ ನಿಂದ ರವಿ ಪ್ರತಿಕ್ರಿಯಿಸಿದ್ದು ಹೀಗೆ
ರವಿ ಮೂರ್ನಾಡು, ಕ್ಯಾಮರೂನ್
ಅವನ ನಗುವಿನ ಉರಿ ಇವಳ ಪ್ರಾಣದ ಪರಿ ಗರ್ಭದಲಿ ಚಿಗುರೆಲೆಗೆ ಹಾಲ ಧ್ವನಿ ! ಮೋಡಗಳ ಗುದ್ದುತ್ತಿದೆ ಮಳೆ ಬಿತ್ತು ಹುಡುಕುತ್ತೇನೆ ಇಳೆಯ ಸುಕ್ಕು ಗೆರೆಗೆ ಬೆವರ ಹನಿ ! ಬಾಯಾರಿ ತುಟಿ ಹರಿದು ಬೆವರೇರಿ ಗಬ್ಬುದ್ದು ನಾಲೆಯಲ್ಲಿ ನೀರಿಲ್ಲ ಗಂಟಲವರೆಗೆ ! ಈ ಖಾಲಿ ಕಮ್ಮಟದಿ ಹನಿದು ರಕುತಕೆ ಜೀವ ಸಿಕ್ಕಿಲ್ಲ ಸವರಿ ರುಚಿ ತುಟಿಯವರೆಗೆ ! ಬಾನಾಡಿ ಹೆಜ್ಜೆಗೆ ನೀನು ಬೀಡಾಡಿ ಜಗತ್ತಿನ ಅವನಿ ಮಡಿಲಲ್ಲಿ ಮಕ್ಕಳ ಕತೆಗೆ ತಾಯಿ ನಾನು ! ಸುರಿಯಲಿದೋ ತಾಪಕೆ ವೀರ್ಯ ಬಿರುಕಿಟ್ಟು ಅಳುತ್ತಿದೆ ಹನಿ ಉಪ್ಪು ನೀರಿನ ಕಣ್ಣಿಗೆ ನಿನ್ನದೇ ಕನಸು ! ಬಿರುಸು ಮೋಡಕೆ ತೆರೆದು ಮೈಯೆದ್ದು ಮೊರೆಯುತಿದೆ ಗುಡುಗು ಮಿಂಚಿಗೆ ಮರೆತು ಸುಳಿದ ಮನಸು ! ]]>
ಚಿತ್ರದೊಂದಿಗೆ ಹಾಗೆಯೇ ನವಿರಾದ ಭಾವಗಳನ್ನು ಹೆಣೆದಿದ್ದೀರ.. ಬಹಳ ಚೆನ್ನಾಗಿದೆ ರವಿಯಣ್ಣ 🙂
really very nice..:-)
ನಿಮಗೆ ನೀವೇ ಸರಿಸಾಟಿ ರವಿಯಣ್ಣ., ನಿಮ್ಮ ಕಾವ್ಯ ಪ್ರೌಢಿಮೆ ನಿಜಕ್ಕೂ ಖುಷಿ ನೀಡುತ್ತದೆ., ಪ್ರತಿ ಸಾಲುಗಳು ಸೂಕ್ಷ್ಮ ಭಾವಗಳು ಹವಿ ನಿಲ್ಲುತ್ತವೆ.. ಅಭಿನಂದನೆಗಳು., ಶುಭವಾಗಲಿ..