ಮೂರ್ತಿ, ರವಿ ಜುಗಲಬಂದಿ

ಎಂ ಎಸ್ ಮೂರ್ತಿ ಆಷಾಡದಲ್ಲಿ  ಇನ್ನೂ ಕಾಲಿಡದ ಮಳೆಯ ಬಗ್ಗೆ ಬರೆದಿದ್ದರು. ಅದಕ್ಕೆ ಕ್ಯಾಮರೂನ್ ನಿಂದ ರವಿ ಪ್ರತಿಕ್ರಿಯಿಸಿದ್ದು ಹೀಗೆ

ರವಿ ಮೂರ್ನಾಡು, ಕ್ಯಾಮರೂನ್

ಅವನ ನಗುವಿನ ಉರಿ ಇವಳ ಪ್ರಾಣದ ಪರಿ ಗರ್ಭದಲಿ ಚಿಗುರೆಲೆಗೆ ಹಾಲ ಧ್ವನಿ ! ಮೋಡಗಳ ಗುದ್ದುತ್ತಿದೆ ಮಳೆ ಬಿತ್ತು ಹುಡುಕುತ್ತೇನೆ ಇಳೆಯ ಸುಕ್ಕು ಗೆರೆಗೆ ಬೆವರ ಹನಿ ! ಬಾಯಾರಿ ತುಟಿ ಹರಿದು ಬೆವರೇರಿ ಗಬ್ಬುದ್ದು ನಾಲೆಯಲ್ಲಿ ನೀರಿಲ್ಲ ಗಂಟಲವರೆಗೆ ! ಈ ಖಾಲಿ ಕಮ್ಮಟದಿ ಹನಿದು ರಕುತಕೆ ಜೀವ ಸಿಕ್ಕಿಲ್ಲ ಸವರಿ ರುಚಿ ತುಟಿಯವರೆಗೆ ! ಬಾನಾಡಿ ಹೆಜ್ಜೆಗೆ ನೀನು ಬೀಡಾಡಿ ಜಗತ್ತಿನ ಅವನಿ ಮಡಿಲಲ್ಲಿ ಮಕ್ಕಳ ಕತೆಗೆ ತಾಯಿ ನಾನು ! ಸುರಿಯಲಿದೋ ತಾಪಕೆ ವೀರ್ಯ ಬಿರುಕಿಟ್ಟು ಅಳುತ್ತಿದೆ ಹನಿ ಉಪ್ಪು ನೀರಿನ ಕಣ್ಣಿಗೆ ನಿನ್ನದೇ ಕನಸು ! ಬಿರುಸು ಮೋಡಕೆ ತೆರೆದು ಮೈಯೆದ್ದು ಮೊರೆಯುತಿದೆ ಗುಡುಗು ಮಿಂಚಿಗೆ ಮರೆತು ಸುಳಿದ ಮನಸು !  ]]>

‍ಲೇಖಕರು G

June 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Paresh Saraf

    ಚಿತ್ರದೊಂದಿಗೆ ಹಾಗೆಯೇ ನವಿರಾದ ಭಾವಗಳನ್ನು ಹೆಣೆದಿದ್ದೀರ.. ಬಹಳ ಚೆನ್ನಾಗಿದೆ ರವಿಯಣ್ಣ 🙂

    ಪ್ರತಿಕ್ರಿಯೆ
  2. Pramod Pammi

    ನಿಮಗೆ ನೀವೇ ಸರಿಸಾಟಿ ರವಿಯಣ್ಣ., ನಿಮ್ಮ ಕಾವ್ಯ ಪ್ರೌಢಿಮೆ ನಿಜಕ್ಕೂ ಖುಷಿ ನೀಡುತ್ತದೆ., ಪ್ರತಿ ಸಾಲುಗಳು ಸೂಕ್ಷ್ಮ ಭಾವಗಳು ಹವಿ ನಿಲ್ಲುತ್ತವೆ.. ಅಭಿನಂದನೆಗಳು., ಶುಭವಾಗಲಿ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: