’ಮುಳ್ಳು ಹೊಕ್ಕ ಪಾದಕ್ಕೆ ರಕ್ತ ಒರೆಸಲು ಬೇಲಿ ಎಲೆ…’ – ಉಮಾರಾವ್ ಕವಿತೆ

ಹಾದಿ ತಪ್ಪಿ

– ಉಮಾ ರಾವ್


ಹಾದಿ ತಪ್ಪಿದಾಗ
ಎಲ್ಲೆಲ್ಲೂ ಸಂಜೆ ಮಬ್ಬು
ಕೈಯ್ಯಲ್ಲಿ ದೀವಿಗೆಯಿಲ್ಲ
ಕತ್ತಲು ಕತ್ತಲು
ಧುತ್ತನೆ ಎದುರಾಗುವ ಬಂಡೆ
ಪಕ್ಕದಲ್ಲೇ ಮೈತಳೆದು ಹೆದರಿಸುವ
ಬೃಹತ್ ವೃಕ್ಷ
ಕತ್ತು ಹಿಸುಕಲು ಬಾಗುವ
ದೀರ್ಘಬಾಹು ಬಿಳಲು
ಎಲ್ಲೋ ಒಂದು ಜೀರುದುಂಬಿ
ಒಂದು ವಿರಹಿ ಕೋಗಿಲೆ
ಅರಸುತ್ತಾ ಹೋದರೆ
ಸಿಕ್ಕಿದ್ದು ಹಾಳು ದೇಗುಲ
ಬಾವುಲಿಗಳ ಕೆಳಗೆ
ಗರ್ಭಗುಡಿಯ ಮೌನದಲ್ಲಿ
ಧ್ಯಾನಿಸುವ ಶಿವಪಾರ್ವತಿಗೆ
ಬಿಲ್ವದ ಹಂಗಿಲ್ಲ
ದೀಪಸ್ತಂಭದ ಹಣತೆಯಲ್ಲಿ
ಬರಿ ಎಣ್ಣೆ ಮಣುಕು
ಬತ್ತಿ ಕಾಗೆ ಪಾಲು
ಮುಗಿಲಲ್ಲಿ ನೇತುಬಿಟ್ಟ
ತೂಗುದೀಪ ಅರ್ಧಚಂದ್ರ
ಎಲ್ಲೆಲ್ಲೂ ಚೆಲ್ಲಿದ
ದೇವಕಣಿಗಲೆ ಪರಿಮಳ
ಕಾಡ ಬೆಳದಿಂಗಳು
ಮುಳ್ಳು ಹೊಕ್ಕ ಪಾದಕ್ಕೆ
ರಕ್ತ ಒರೆಸಲು ಬೇಲಿ ಎಲೆ
ಬೀಸಿ ಬರುವ ತಣ್ಣನೆಯ ಗಾಳಿಗೆ
ಎದೆ ನಡುಕ
ದೂರದಿಂದ
ದೇವದಾಸಿಯ ಗೆಜ್ಜೆಯುಲಿಯೊಡನೆ ಹರಿದುಬಂದ
ಎಳೆಕಂದನ ಆಕ್ರಂದನ
 
 

‍ಲೇಖಕರು G

January 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ. ಓದುತ್ತಿದ್ದಂತೆ ಆಲನ ಹಳ್ಳಿಯವರ ಕಾಡು ಕಾದಂಬರಿಯಲ್ಲಿ ಕಿಟ್ಟಿ ಮತ್ತು ಕಮಲಮ್ಮನವರು ಕಾಡು ಹೊಕ್ಕುವ ದೃಶ್ಯಗಳು ನೆನಪಾದವು.

    ಪ್ರತಿಕ್ರಿಯೆ
  2. ಶೇಷಗಿರಿ ಜೋಡಿದಾರ್

    ಮುಗಿಲಲ್ಲಿ ನೇತುಬಿಟ್ಟ
    ತೂಗುದೀಪ ಅರ್ಧಚಂದ್ರ…. nice image…. delighted….good one… UmaRao..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: