ರಾಜೇಂದ್ರ ಪ್ರಸಾದ್
ಈ ಮೀನಿಂದಲೇ ಪರಾಶರ ಪರಾಭವಗೊಂಡು
ಪರಾಗಸ್ಪರ್ಶವಾದ ಬಳಿಕ ಪರಿಣಯ
ಪರಿಸಮಾಪ್ತಿಗೊಳಿಸಿಕೊಂಡದ್ದು.
ಈ ಮೀನಿಂದಲೇ ಶಾಕುಂತಲೆ ವಿರಹದುರಿಗೆ
ಸಿಕ್ಕು ಕಾಡಿನಲ್ಲಿ ಕಾಲಯಾಪನೆಯ ಮಾಡಿ
ಎಂದೂ ಮರೆಯದ ಉಂಗುರ ಉಪಾಖ್ಯಾನಕ್ಕೆ ಕಾರಣವಾಗಿದ್ದು.
ಈ ಮೀನಿಂದಲೇ ಯೇಸುವು ಹಸಿದ ಜನರಿಗೆ
ಅಕ್ಷಯವೆನಿವಷ್ಟು ಅನ್ನವುಣಿಸುತ್ತಾ ರೊಟ್ಟಿ ಮುರಿದು
ಸದಾ ಶತ್ರು ಪ್ರೀತಿಸುವ ಪಾಠ ಹೇಳಿದ್ದು.
ಅರೆ! ಈ ಮೀನೇ ಆದಿಗೆ ಮೊದಲಾಗಿ ಅಂತ್ಯಕ್ಕೆ ಮನುವಾಗಿ
ಭೂಚರಗಳ ನಾವೆಯಾಗಿ ಒಡಲಲ್ಲಿ ಹೊತ್ತು ಸಲಹಿದ್ದು
ಮೀನೆಂದರೆ ಬರೀ ಮೀನೇ ಎಂದು ಎಣಿಸದಿರು
ಮೀನು ಮನುಕುಲದ ಶಕ್ತಿಮದ್ದು.
super sir