ಮಹಿಪಾಲರೆಡ್ಡಿ ಮುನ್ನೂರ್ ಹೊಸ ಗಜಲ್

ಮಹಿಪಾಲರೆಡ್ಡಿ ಮುನ್ನೂರ್

ನಿನ್ನೆಯ ರಾತ್ರಿಯಲಿ ಕನಸು ಹತ್ಯೆಯಾದಂತಿದೆ ದೊರೆಸಾನಿ..
ಕಣ್ದೆರೆದರೆ ನೀನಿಲ್ಲ ಬರೀ ಕತ್ತಲೆಯಂತಿದೆ ದೊರೆಸಾನಿ ..

ಹರೆಯ ನೆಪದಲ್ಲಿ ಚಿಗುರುತ್ತಿದ್ದ ನವಿಲುಗರಿಯಂಥ ಸಂಬಂಧಗಳು..
ಬಂಧಕ್ಕೆಂದು ಚಾಚಿದ ಬೊಗಸೆಯಿಂದ ಜಾರಿ ಸೋರಿದಂತಿದೆ ದೊರೆಸಾನಿ..

ಪುಟವೆಲ್ಲ ಪಟಪಟನೆ ತೆರೆದು ನೋಡಿದರೆ ತುಂಬಿವೆ ನಿಟ್ಟುಸಿರುಗಳು ..
ನಲುಗಿದ ಪದಗಳೆಲ್ಲ ಎದೆಯಿಂದ ಜಾರತಿರುವ ಸೆರಗಿನಂತಿದೆ ದೊರೆಸಾನಿ..

ಪ್ರತಿಷ್ಠೆ ತುಂಬಿದ ಮಾತಿನ ಮನೆಯಲ್ಲಿಲ್ಲ ಲವಲವಿಕೆಯ ತುಣುಕುಗಳು..
ಯಾವ ಸಂಬಂಧವಿಲ್ಲದ ಲಡಾಯಿ ಗತ ಅಪಮಾನದಂತಿದೆ ದೊರೆಸಾನಿ..

ಆ ರಾತ್ರಿ ಸತಾಯಿಸಿ ಸಾಯಿಸುತ ನೀ ಮರೆಯಾದ ಕ್ಷಣಗಳು..
‘ಮೈನಾ’ ಕಣ್ಣ ಕೊನೆಯಲ್ಲಿ ಸತ್ತ ಕನಸು ಹೊರಳಿ ಬಿಕ್ಕುವಂತಿದೆ ದೊರೆಸಾನಿ

‍ಲೇಖಕರು Avadhi

June 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: