ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ – ಚೌಪದಿಯ ಲಯದಿ…

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಸಣ್ಣ ಭೇಟಿಯಲಿ
ಕಣ್ಣು ಹೊಳೆದು
ಬಿಟ್ಟು ಹೋಗಿರುವ ಮಾತು
ನನ್ನ ಕವಿತೆ

ಪುರಾಣದ ಹೆಣ್ಣಲ್ಲ ನೀ
ಸದ್ಯದ ಸುಡು ನೆಲದಲಿ
ಪಾದ ಪುಟಿಸಿ
ತೆಳ್ಳಗೆ ಹರಿದು ಬಂದ ತೊರೆ

ನಿಮಿಷದಲ್ಲೇ
ದೊಡ್ಡ ವಿರಾಮ ನೀಡಿ
ನಾಡಿ ಮಿಡಿದ ಹೊತ್ತಲ್ಲಿ
ಅವಸರಿಸದೆ ಕಾಯುತ್ತಿರುವೆ
ಕಡಲ ಬಾಗಿಲ ಮುಂದೆ

ವಿನಂತಿಯಿಷ್ಟೇ
ನೇರ ಕಡಲಿಗೇ ನುಗ್ಗದೆ
ದಡದಲ್ಲೊಂದಿಷ್ಟು ಆಡು
ಕೈಬೆರಳ ನೀಡುವೆ

ಚೌಪದಿಯ ಲಯದಿ
ಸಾಗುವ ಹೆಜ್ಜೆಗಳು
ನಿತ್ಯ ನೆನಪಿಗೆ
ಹಾಡೊಂದ ಬರೆಯಲಿ

‍ಲೇಖಕರು avadhi

January 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: