ಮರೆವುದುಂಟೇ ಬಳೆಚೂರು ಗೀರಿದ ರಕ್ತಗೆಂಪು?

 

 

 

 

ರಾಜ್ ಕುಮಾರ್ ಮಡಿವಾಳರ್

ಸುರಗಿ ನೀರು ಬಿದ್ದ ಹುಡುಗಿ
ಕ್ಷಣದಲ್ಲಿ ಹೆಂಗಸಾದಂತೆ
ಮಳೆ ಮಾರನೆದಿನದ ಬೆಳಕು!

ಹಾದಿ ತುಂಬ ಉದುರಿ ಬಿದ್ದ
ಗುಲ್ಮೋಹರ್ ಪಕಳೆ ಒಂದೊಂದು ಹೆಜ್ಜೆ
ರುಬ್ಬಿಟ್ಟ ಹೂರಣದ ಮೇಲೆ ಇರುವೆ ನಡೆದಂತೆ

ಬೀದಿಗೆಂಪು, ಹಾದಿಗೆಂಪು, ದಾರಿಗೆಂಪು
ಗಿಡಗೆಂಪು, ನೆಲಗೆಂಪು ಬ್ಯಾರೆ ಮುಗಿಲ್ಗೆಂಪು
ಬೆಳಕೆಂಬೊದು ಹೊಚ್ಚಿದಂತೆ ತೊಳೆದು ಹಿಂಡಿಟ್ಟ ರಗ್ಗು!

ತೊದಲ್ಗೆಂಪ ತುಟಿಯ ಹುಡುಗಿ ಹಾಲ್ಗೆಂಪು ಮಾತು!
ಗಲ್ಲದ ಕೆಂಪು, ಅವಕ ಮುತ್ತಡರಿ ಹೆಚ್ಚಿದ ಕೆಂಪು ತಂಪು

ತಂಗಾಳಿಯ ಒಳಗೆಂಪು ಎದೆಮೆತ್ತಿ ನೆನಪಾದುದೇಕೆ ಈಗ..

ಬೆರಳಿಗೆ ಬೆರಳ ಹೊಸೆದ ಬೆಸುಗೆಂಪು ಬಿಟ್ಹೊರಳಿ
ಹೊಂಟಾಗ ಮುನಿಸ ನಸುಗೆಂಪು, ಮತ್ತೆ ಎದೆಗಪ್ಪಿ
ಹಣೆಗೊತ್ತಿರೆ ತುಟಿ ಹಣೆ ಓಕಳಿಗೆಂಪು….

ಒಂದೇ? ಎರಡೇ? ನಿಲ್ಲೆಂದು ಕೈ ಹಿಡಿಯಲು
ಒಲ್ಲೆಂದು ಕೊಸರಿ ನೀ ಓಡುತಿರೆ ಹಿಡಿದೆಳೆದ
ಜೋರಿಗೆ ಮರೆವುದುಂಟೆ ಬಳೆಚೂರು ಗೀರ ರಕ್ತಗೆಂಪು..

ಈಗಿನ್ನೂ ಇದೆ ಆ ಬಂಗಾರ ಚುಕ್ಕಿಯ
ಕೆಂಪು ಬಳೆ ನನ್ನ ಬಳಿಯಲ್ಲೆ, ನೀನುಳಿಸಿ
ಹೋದ ಒಂದೇ ನೆನಪಿನ ಕೆಂಪು ಹೊಳೆ…

ಮಾರನೆಯ ದಿನವಿದು ಸುರಿದು ಮಳೆ..!
ಇನ್ನು ಮಳೆ ಬಿದ್ದ ದಿನದ ಕವಿತೆ ಬರೆಯಲಾದೀತೆ?
ಊರ ಕಣ್ಗೆಂಪಿಗೆ ಆರಿದ ಕೆಂಡ್ಗೆಂಪು ಪ್ರೀತಿ ಮರೆಯಲಾದಿತೆ?

‍ಲೇಖಕರು admin

January 13, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. suresh

    ಒಂದಕ್ಕಿಂತ ಒಂದು ಚಂದದ ಕವಿತೆಗಳು..
    ಹೊಸಹೊಸ ವಿಚಾರ ಮತ್ತು ವಿಭಿನ್ನವಾದ ಹೊಳಹುಗಳನ್ನು ಹೊತ್ತು ಬಂದ ಈ ಕವಿತೆಗಳು ಮತ್ತೆ ಮತ್ತೆ ಓದಿಸಿಕೊಳ್ಳುವಂತಿವೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: