ಮರೆಯದ ಕಣ್ಣೋಟ…

ಮುತ್ತು ಬಳ್ಳಾ ಕಮತಪುರ

ಅಮಲು ಎರಿದ ಚಂದ್ರ ರೂಪವತಿ ಲಾವಣ್ಯಕೆ ಮರುಳಾಗಿ ಕಂಡಿದೆ |
ಧರೆಗಿಳಿದ ಮಳೆರಾಯ ರಂಗೇರಿ ಅಂಗಳಕೆ ಬಣ್ಣವಾಗಿ ಕಂಡಿದೆ ||

ದ್ವೇಷ ಹುಟ್ಟಿಸುವ ಜಗದಲಿ ಈ ನೆಲದ ಉಸಿರು ಆಳವಾಗಿ ಹಬ್ಬಿದೆ |
ಪ್ರೇಮಕೆ ಅಂಟಿದ ಧರ್ಮದ ಬೇರುಗಳು ಈಗ ವಸ್ತ್ರವಾಗಿ ಕಂಡಿದೆ ||

ಎಂದಿಗೂ ಮರೆಯದ ಕಣ್ಣೋಟ ಇರಿಯುತ್ತಿದೆ ಕಣ್ಣ ಸಲುಗೆಯಲಿ |
ಚುಕ್ಕಿಯಿಟ್ಟ ರಂಗೋಲಿಯ ದೃಷ್ಟಿ ಗೊಂಬೆ ಕಥೆ ನಿಲುವಾಗಿ ಕಂಡಿದೆ ||

ದೇಹದುಸಿರು ಏರಿಳಿತಗಳು ಕಳೆದ ಕತ್ತಲ ರಾತ್ರಿಯ ಕರಾಳ ನೆನಪು |
ಮಂಜುಗಡ್ಡೆ ಕರಗಿ ಕುಂದಿ ಮನದಾಸೆಯ ತಣಿಸಿ ಗೆಲುವಾಗಿ ಕಂಡಿದೆ ||

ಮುತ್ತು ಎಂದಾದರೂ ಎದುರಾದಾಗ ಕನಸುಗಳ ದಾಖಲಿಸಿ ಬಿಡು |
ಸಾಲು ದೀಪಗಳ ನಡುವೆ ಅವಳ ಹಚ್ಚಿದ ಹಣತೆ ಬೆಳಕಾಗಿ ಕಂಡಿದೆ ||

‍ಲೇಖಕರು Admin

August 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: