ಮುತ್ತು ಬಳ್ಳಾ ಕಮತಪುರ
ಅಮಲು ಎರಿದ ಚಂದ್ರ ರೂಪವತಿ ಲಾವಣ್ಯಕೆ ಮರುಳಾಗಿ ಕಂಡಿದೆ |
ಧರೆಗಿಳಿದ ಮಳೆರಾಯ ರಂಗೇರಿ ಅಂಗಳಕೆ ಬಣ್ಣವಾಗಿ ಕಂಡಿದೆ ||
ದ್ವೇಷ ಹುಟ್ಟಿಸುವ ಜಗದಲಿ ಈ ನೆಲದ ಉಸಿರು ಆಳವಾಗಿ ಹಬ್ಬಿದೆ |
ಪ್ರೇಮಕೆ ಅಂಟಿದ ಧರ್ಮದ ಬೇರುಗಳು ಈಗ ವಸ್ತ್ರವಾಗಿ ಕಂಡಿದೆ ||
ಎಂದಿಗೂ ಮರೆಯದ ಕಣ್ಣೋಟ ಇರಿಯುತ್ತಿದೆ ಕಣ್ಣ ಸಲುಗೆಯಲಿ |
ಚುಕ್ಕಿಯಿಟ್ಟ ರಂಗೋಲಿಯ ದೃಷ್ಟಿ ಗೊಂಬೆ ಕಥೆ ನಿಲುವಾಗಿ ಕಂಡಿದೆ ||
ದೇಹದುಸಿರು ಏರಿಳಿತಗಳು ಕಳೆದ ಕತ್ತಲ ರಾತ್ರಿಯ ಕರಾಳ ನೆನಪು |
ಮಂಜುಗಡ್ಡೆ ಕರಗಿ ಕುಂದಿ ಮನದಾಸೆಯ ತಣಿಸಿ ಗೆಲುವಾಗಿ ಕಂಡಿದೆ ||
ಮುತ್ತು ಎಂದಾದರೂ ಎದುರಾದಾಗ ಕನಸುಗಳ ದಾಖಲಿಸಿ ಬಿಡು |
ಸಾಲು ದೀಪಗಳ ನಡುವೆ ಅವಳ ಹಚ್ಚಿದ ಹಣತೆ ಬೆಳಕಾಗಿ ಕಂಡಿದೆ ||
0 ಪ್ರತಿಕ್ರಿಯೆಗಳು