ರಘು ಅಪಾರ
ಮೂರು ದಾರಿ ಕೂಡುವಲಿ ಯಾರೊ
ನನ್ನ ಸರ್ವಸ್ವವನೂ ಕದ್ದರು
ಗೆಳೆಯಾ, ಆಗಲೂ ಈ ಜಗದಲಿ
ಮುಕ್ಕೋಟಿ ದೇವರುಗಳು ಇದ್ದರು
**
ನೀನು ವಂಚಿಸುತಿರುವುದರ ಅರಿವು
ನನಗಿಲ್ಲ ಎಂದಲ್ಲ
ಸದಾ ಎಚ್ಚರಿಕೆಯಿಂದಿದ್ದು ನನಗೂ
ಸಾಕುಸಾಕಾಗಿದೆಯಲ್ಲ
**
ದಣಿವಾಯಿತೆಂದು ಕೂತಿರುವೆ
ಈ ಊರು ನಂದಲ್ಲ
ಸ್ವಂತ ಊರು ಸ್ವಂತ ಮನೆ
ಸೋತವನಿಗೆ ಹೊಂದಲ್ಲ







apara super…
super apara…
Apara, read you after many days, most of the time I am not clever enough to understand poetry, but after reading your poem I felt you gave poetic expression to the feelings inside me. specially last 8 lines… sounds like my own experience…Thank you..
-Suma
ವೆಂಕಟ್ರಮಣ, ರವೀಂದ್ರ. ಸುಮಂಗಲಾ ಮತ್ತು ಅವಧಿ – ಥ್ಯಾಂಕ್ಸ್. ಖುಷಿಯಾಯ್ತು.
ಸರಳ ಸುಂದರ ಪದಗಳ ಹಂದಿರ
ಓದಿದ ಬಳಿಕವೂ ಕರ್ಣದೊಳು ನಿಮ್ಮ ಕವಿತೆಯದೆ ಇಂಚರ
ನೋವುಂಡ ಮನಸುಗಳಿವು ಸಾವಿರ ಸಾವಿರ
ನಿಮ್ಮ ಕವಿತೆ ಕೊಡುವ ಸಮಾಧಾನವದು ಅಪಾರ..
apaara …yaako vishaada vishaada …
very nice lines
ನಿಮ್ಮ ‘ಮದ್ಯಸಾರ’ ದ ಅಭಿಮಾನಿ ನಾನು. ಬರಲಿ ಇನ್ನೊಂದು ‘ಗೀತಸಾರ!- ಡಾ.ಗಣೇಶ ಎಂ.ನೀಲೇಸರ
“ಸದಾ ಎಚ್ಚರಿಕೆಯಿಂದಿದ್ದು ನನಗೂ
ಸಾಕುಸಾಕಾಗಿದೆಯಲ್ಲ”
ಈ ಅನ್ನಿಸಿಕೆ ನನಗೂ ಬಹಳ ಸಾರಿ ಉಂಟಾಗುತ್ತದೆ. ಈಗಂತೂ every other man / woman ನಮ್ಮನ್ನು ವಂಚಿಸುವದಕ್ಕೇ ಹೊಂಚುಹಾಕಿಕೊಂಡಿರುವಂತೆ ಅನ್ನಿಸುತ್ತಿರುತ್ತದೆ. ಜೀವನದ ಮುಖ್ಯ ಗುರಿಯೆಂದರೆ ಇಂಥವರಿಂದ ನಮ್ಮನ್ನು ರಕ್ಷಿಸಿಕೊಳ್ಳುವದೇ ಎಂದಾಗಿ ಬಿಟ್ಟಿದೆ! It’s so disgusting! 🙁