ರಮೇಶ್ ಹಿರೇಜಂಬೂರ್
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹಗಳ ಕುರಿತ “ಮತ್ತೆ ಮತ್ತೆ ತೇಜಸ್ವಿ” ಡಿವಿಡಿಯನ್ನು ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ತೇಜಸ್ವಿಯವರ ಒಡನಾಡಿ, ರೈತ ಹೋರಾಟಗಾರರಾದ ಕಡಿದಾಳು ಶಾಮಣ್ಣ ಬಿಡುಗಡೆ ಮಾಡಿದರು. ಟೋಟಲ್ ಕನ್ನಡ ಈ ಡಿವಿಡಿ ಹೊರತಂದಿದೆ. ಸಮಾರಂಭದಲ್ಲಿ ಪತ್ರಕರ್ತ ಜೋಗಿ. ವಿಧಾನ ಪರಿಷತ್ ಸದಸ್ಯ ಬಿ.ಎಲ್.ಶಂಕರ್, ಉಪನ್ಯಾಸಕ ನರೇಂದ್ರ ರೈ ದೇರ್ಲ, ಕುವೆಂಪು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಕೆ.ಸಿ.ಶಿವಾರೆಡ್ಡಿ ಪಾಲ್ಗೊಂಡಿದ್ದರು. ಕಡಿದಾಳು ಶಾಮಣ್ಣ ಅವರ ಪತ್ನಿ ಶ್ರೀದೇವಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಕೆಲವು ಸ್ಮರಣೀಯ ಕ್ಷಣಗಳು ಅವಧಿ ಆಪ್ತರಿಗೆ…
ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಫೋಟೋಗಳು : ರಮೇಶ್ ಹಿರೇಜಂಬೂರ್
ಧನ್ಯವಾದಗಳು ಗೆಳೆಯ ರಮೇಶ್. ಉತ್ತಮ ಫೊಟೊಗಳಿವು.
ಗೆಳೆಯ ರಮೇಶ್ ಹಿರೇಜಂಬೂರ್,
ಕಾರ್ಯಕ್ರಮಕ್ಕೆ ಕೆಲಸದ ಒತ್ತಡದಿಂದಾಗಿ ಬರಲಾಗದಿದ್ದ ಕೊರಗನ್ನು ಇಡೀ ಕಾರ್ಯಕ್ರಮದ ಚಿತ್ರಗಳನ್ನು ತೋರಿಸುವ ಮೂಲಕ ನಿವಾರಿಸಿದ್ದೀರಿ…ಧನ್ಯವಾದಗಳು.