ಮಕ್ಕಳ ದಿನದಂದೇ ಕಂಡ ಮುಖ..

ರೇಣುಕಾ ರಮಾನಂದ್ 

ಜಾತ್ರೆಗಳಲ್ಲಿ
ಮಾರಲ್ಪಡುತ್ತವೆ
ಎಳೆಮಕ್ಕಳ
ಕನಸುಗಳು

ಉಪವಾಸವಿದ್ದವರೊಂದಿಗೆ
ಹೊಟ್ಟೆತುಂಬಿದವರು ಮಾತ್ರ
ತಮಾಷೆ ಮಾಡುತ್ತ
ತಾಸುಗಟ್ಟಲೆ ನಿಂತು ಚೌಕಾಸಿ
ಮಾಡಬಲ್ಲರು

ಹಿಂದೆಮುಂದೆ ಎಲ್ಲ ಕೇಳಿ
ಕೊನೆಗೂ ಬಿಟ್ಟು ಹೋಗಲು
ಕಾರಣ ಸಿಗುತ್ತದೆ
ಕ್ವಾಲಿಟಿ ಸರಿ ಇಲ್ಲ

ಹತ್ತು ರೂಪಾಯಿಯ
ಆಟಿಕೆಯಲ್ಲಿ
ಬರೀ ಹಸಿವೆ
ಇರುತ್ತದೆ ಸ್ವಾಮಿ…
ನೀವು ಕ್ವಾಲಿಟಿ ಹುಡುಕುತ್ತಿದ್ದೀರಿ..

ಕಾರಣವೇನೇ ಇರಲಿ
ಕೊಲೆ ,ಸುಲಿಗೆ,ಕಳ್ಳತನ
ಗೊತ್ತಿಲ್ಲದ ಬಾಲ್ಯ
ದುಡಿಮೆಗೆ ಇದೀಗ ತಾನೇ
ಹೆಜ್ಜೆಯಿಟ್ಟಿದೆ

“ಶಾಲೆಗೆ ಹೋಗದೇ ವ್ಯಾಪಾರ
ಮಾಡ್ತಿದ್ದೀಯೇನು?”
ದಬಾಯಿಸಬೇಡಿ….
ಉತ್ತರ ಕೇಳಿದರೆ ಪೆಚ್ಚಾದೀರಿ
‘ಇಂದು ರವಿವಾರ ಅಣ್ಣಾ…’

‘ಖರೀದಿ ಮಾಡಿದ್ರೆ ತಾನೆ
ಊಟ,ಶಾಲೆ ಎಲ್ಲಾ….’
ಎಂದೇನೂ ನಿಮ್ಮ ಕಾರು ಜೋರು
ನೋಡಿ ಹೆದರಿಕೊಂಡ ಅವ
ಉಸುರಲಾರ
ಮೌನ ಮತ್ತು ಕಣ್ಣೀರು
ಹಸಿವಿನ
ಎರಡು ಮಕ್ಕಳು

‘ಮನೆಯಲ್ಲಿ ಚಿಕ್ಕವರ್ಯಾರಿಲ್ಲ ‘
ಸಬೂಬು ಹುಡುಕುತ್ತಿದ್ದೀರೇನು…?
ಬೀದಿಯಲ್ಲಿ ಹೋಗೋ
ಒಬ್ಬೊಂಟಿ ಮಗುವಿನ
ಕಣ್ಣ ಬೆಳಕಿಗಾದೀತು
ಹೆಚ್ಚೇನೂ ಚೌಕಾಸಿ ಮಾಡದೇ
ಕೊಳ್ಳಿ ಸ್ವಾಮಿ..

‍ಲೇಖಕರು avadhi

November 14, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. kaligananath Gudadur

    Lingering lines

    ಹತ್ತು ರೂಪಾಯಿಯ
    ಆಟಿಕೆಯಲ್ಲಿ
    ಬರೀ ಹಸಿವೆ
    ಇರುತ್ತದೆ ಸ್ವಾಮಿ…
    ನೀವು ಕ್ವಾಲಿಟಿ ಹುಡುಕುತ್ತಿದ್ದೀರಿ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: