ಭಾಗ್ಯ ಸಿ ಎಚ್ ಅನುವಾದಿತ ಕವಿತೆ – ಬೆಳಗಿನ ಗಾಥೆ…

ಮೂಲ : ಅಮಿರ್ ಓರ್
ಕನ್ನಡಕ್ಕೆ : ಭಾಗ್ಯ ಸಿ ಎಚ್

ಸೂರ್ಯೋದಯಕ್ಕೇ ಮನುಷ್ಯನೊಬ್ಬ ಎದ್ದ, ಕಿಟಕಿಗಳನ್ನು ತೆರೆದ
ಸೂರ್ಯನ ಬೆಳಕಿನ ಕಿರಣ- ಪೂರ್ವದಿಂದ ಪಶ್ಚಿಮಕ್ಕೆ
ಅವನ ಹೃದಯದವರೆಗೂ ತಲುಪಿ ಅವನ ಶೋಕವನ್ನು ಸುಟ್ಟಿತು
ಅವನು; ಈ ಜಗವೆಲ್ಲ ಸುಂದರ – ಎಂದ
ಅಯ್ಯೋ,ನಾನೇಕೆ ಇಷ್ಟು ಖಿನ್ನನಾಗಿದ್ದೆ?
ಯಾವ ಕನಸು ನನ್ನನ್ನು ಹಾದು ಹೋಯಿತು? ತಡಿ ಎಚ್ಚರಾಗುವೆ!
ಈ ಬೆಳಗು ನಾನೊಂದು ಹೊಸ ಜಗವನ್ನು ಸೃಜಿಸುವೆ!
ಎಂದೂ ಇಲ್ಲದ ಒಂದನ್ನು.
ನಾನು ಎದ್ದು ಎಲೆಗಳ ಜಗತ್ತನ್ನು ಹೊಗುವೆ
ಅದರ ಹಚ್ಚ ಹಸಿರು ಹೃದಯವನ್ನು ಮುಟ್ಟುವೆ!
ಚಿಟ್ಟೆಯಂತೆ ಹೂಗಳ ನಡುವೆ ಫಡಫಡಿಸುವೆ
ಬದುಕಿನ ಸಿಹಿ ಮಧುವನ್ನು ಹೀರುವೆ
ಹೆಚ್ಚು ದೂರವೇನಲ್ಲ:

ಅವನು ಸಜ್ಜಾಗಿ ಹತ್ತು ಹೆಜ್ಜೆ ಇಟ್ಟ,
ಗತವನ್ನು ತೊಳೆದು ಸ್ವಚ್ಛಗೊಳಿಸಿದ ಬದುಕು.
ಅವನು ಕೆಂಪಡರುತ್ತಿರುವ ಪೂರ್ವದೆಡೆಗೆ ಹೆಜ್ಜೆಹಾಕಿದ
ಅವನ ಕಣ್ಣುಗಳು ಹಿಗ್ಗಲಿಸಿ ನೋಡಿದವು.
ಹತ್ತು ಹೆಜ್ಜೆ ಹೆಚ್ಚೇನಲ್ಲ: ಅವನಿಗದು
ಆ ಎಡೆಗೆ ಬದುಕಿಗಿಂತ ಸುದೀರ್ಘ:
ಸವಿ ಮಧುವುಣ್ಣುವ ಹೊತ್ತಿನಲಿ, ಅವನ ನಿನ್ನೆಗಳನ್ನು ಯಾರು ಗುರುತಿಸುತ್ತಾರೆ
ಯಾರು ಹತ್ತು ಶಾಶ್ವತ ಕ್ಷಣಗಳನ್ನೆಣಿಸುತ್ತಾರೆ?
ಒಂದಾನೊಂದು ಕಾಲದಲ್ಲಿ ಮನುಷ್ಯನೊಬ್ಬ ಸೂರ್ಯೋದಯಕ್ಕೇ ಎದ್ದ
ಮರೆತ ಸ್ವರ್ಗದೆಡೆ ಚಿಮ್ಮಿದ.

‍ಲೇಖಕರು avadhi

May 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: