‘ಕತ್ತಲ ಕಾಲದಲ್ಲಿ ಹಾಡೋದು ಉಂಟೇ?’ ಎನ್ನುವ ಹೆಸರನ್ನು ಹೊತ್ತ ಬ್ರೆಕ್ಟ್ ಸಂಜೆಯನ್ನು ಥಿಯೇಟರ್ ತತ್ಕಾಲ್, ಲೋಕಚರಿತ ಹಾಗೂ ಆಕ್ಟ್ ಎನಾಕ್ಟ್ ಜಂಟಿಯಾಗಿ ಇತ್ತೀಚಿಗೆ ಬೆಂಗಳೂರಿನಲ್ಲಿ ಪ್ರದರ್ಶಿಸಿತು. ಇದು ಬ್ರೆಕ್ಟ್ ನ ಹಲವು ನಾಟಕಗಳನ್ನು ಇಂದಿನ ದಿನಕ್ಕೆ ಕನ್ನಡಿ ಹಿಡಿವಂತೆ ರೂಪಿಸಿದ್ದ ಕೊಲಾಜ್. ನೀನಾಸಂ ಪದವೀಧರೆ ಗೀತಾ ಸಿದ್ಧಿ ಈ ಬ್ರೆಕ್ಟ್ ರಂಗ ಮಂಡನೆಯನ್ನು ಮಾಡಿದರು.
ನಟರಾಜ ಹುಳಿಯಾರ್ ಅವರು ಹೆಣೆದುಕೊಟ್ಟಿದ್ದ ಸೂತ್ರಕ್ಕೆ ಗೀತಾ ಸಿದ್ಧಿ ಕೊಟ್ಟ ರಂಗರೂಪ ಇಂದಿನ ಭಾರತದ ಕಟು ವಾಸ್ತವವನ್ನು ಸಮರ್ಥವಾಗಿ ಮುಂದಿಟ್ಟಿತು. ಅತ್ಯಂತ ಲವಲವಿಕೆಯಿಂದ ಇಡೀ ತಂಡ ಪ್ರದರ್ಶನವನ್ನು ಮನಮುಟ್ಟುವಂತೆ ಮಾಡಿತು. ಕತ್ತಲ ಕಾಲದ ಕರಾಳ ಮುಖವನ್ನು ಸಮರ್ಥವಾಗಿ ತಲುಪಿಸಲು ಗೀತಾ ಸಿದ್ಧಿ ಯಶಸ್ವಿಯಾದರು.
ಇದೆ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಧರ್ಮೇಂದ್ರ ಅರಸು ಅವರನ್ನು ಸನ್ಮಾನಿಸಲಾಯಿತು.
ತಾಯ್ ಲೋಕೇಶ್ ಕಂಡಂತೆ ಈ ನಾಟಕ ಹೀಗಿದೆ-
0 ಪ್ರತಿಕ್ರಿಯೆಗಳು