ನಿನ್ನೆ ಶಿರಸಿಯಲ್ಲಿ ಪ್ರೊ. ಬಿ. ಎಚ್.ಶ್ರೀಧರ ಅವರ ಎರಡು ಪುಸ್ತಕಗಳು ಬಿಡುಗಡೆಯಾದವು.
ಡಾ.ಎಂ.ಜಿ.ಹೆಗಡೆ ಸಂಪಾದಿಸಿದ ಶ್ರೀಧರರ ಇಂಗ್ಲಿಷ್ ಕವನ ಮತ್ತು ಲೇಖನಗಳ ಸಂಗ್ರಹ ‘Afterglow’ ಮತ್ತು
ರಾಜಶೇಖರ್ ಹೆಬ್ಬಾರ್ ಸಂಪಾದಿಸಿದ ಶ್ರೀಧರರ ಕವನಗಳ ಸಂಕಲನ ‘ಜೀವವಾಣಿ’ಯನ್ನು ಹಿರಿಯ ಸಾಹಿತಿ ಶಾಮಸುಂದರ ಬಿದರಕುಂದಿ ಬಿಡುಗಡೆಗೊಳಿಸಿದರು. ಪುಸ್ತಕಗಳ ಕುರಿತು ಡಾ.ಅಮರನಾಥ್ ಮಾತನಾಡಿದರು.
ಶ್ರೀಧರರ ‘ ಕದಂಬ ವೈಭವ’ @60 ಕುರಿತು ಎಂ.ಜಿ. ಹೆಗಡೆ ಮಾತನಾಡಿದರು. ಕಿರಣ್ ಭಟ್ ಶ್ರೀಧರರ ಕವನಗಳನ್ನು ಓದಿದರು. ವಿಷ್ಣು ಹೆಗಡೆ ಸ್ವಾಗತಿಸಿದರು. ರಾಜಶೇಖರ್ ಹೆಬ್ಬಾರ್ ಗೌರವಿಸಿದರು. ರೇಖಾ ಬ್ರಹ್ಮಾನಂದ ವಂದಿಸಿದರು.
ಬಿ ಎಚ್ ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿ ಕಾರ್ಯಕ್ರಮ ಸಂಘಟಿಸಿತ್ತು.






0 Comments