ಬಿಟ್ಟು ಹೋದವರ ಚರಮಗೀತೆ

ಆರ್ ಎನ್ ದರ್ಗಾದವರ

ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲಿಲ್ಲ
ಹೂತ ಶವಗಳ ದಿಬ್ಬದಂತಿದ್ದವು

ಇಲಿ, ಹೆಗ್ಗಣಗಳು ಉಪವಾಸ ನರಳುತ್ತಿದ್ದವು
ಕೆರೋಸಿನ್ ದೀಪದ ಹೊರತು
ಯಾವ ಬೆಳಕು ಸುಳಿಯುತ್ತಿರಲಿಲ್ಲ
ಹೊಟ್ಟೆ ತುಂಬಿದ ಮೇಲೂ ಹಳದಿಕಣ್ಣಿನ
ನಾಯಿಗಳು
ಬೀದಿಯಲಿ ತಿರುಗುತ್ತಿದ್ದವು

ನನ್ನವರು ಆಳುತ್ತಿರಲಿಲ್ಲ, ಆಳಾಗಿದ್ದವರು
ನನ್ನವರು ಅಳುತ್ತಿರಲಿಲ್ಲ
ಅಸಲಿಗೆ ಅಳುವೆ ಬರುತ್ತಿರಲಿಲ್ಲವೆನ್ನಿ,
ಬಹುಶಃ
ಕಣ್ಣೀರು ಬತ್ತಿಯಾಗಿತ್ತು

ಮದ್ಯ ಕುಡಿದವರ ಮಧ್ಯ ಇರುತ್ತಿದ್ದರು,
ಅವರು ಎಸೆದ ಬಾಟಲಿಯಲಿ
ನೃತ್ಯ ಮಾಡುತ್ತಿದ್ದರು
ಬೆವರಿಗೂ, ರಕುತಕೂ ವ್ಯತ್ಯಾಸ
ಅರಿಯದಷ್ಟು ಪಾಪಿಗಳಾಗಿದ್ದರು

ನನ್ನವರು ತಮಗಾಗಿ ಜೋಗುಳ
ಹಾಡಿದವರಲ್ಲ,
ತೊಟ್ಟಿಲ ಕಟ್ಟಿದವರಲ್ಲ ಮಷಿನ್ ನಂತಿದ್ದವರು
ಕಾರ್ಯ ಸ್ಥಗಿತವಾದಗಲೊಮ್ಮೆ
ರಿಪೇರಿಗೊಳಗಾದವರು

ಕನ್ನಡಿ ನೋಡಲು ನಾಚುತ್ತಿದ್ದವರು,
ಗೋಡೆ ಜೊತೆಯಲಿ ಮಾತಿಗಿಳಿಯುತ್ತಿದ್ದರು
ಕತ್ತಲಿಗೂ ತುಂಡು ಮೈಬಟ್ಟೆಯಿಂದ
ಕೌದಿ ಹೊಲೆದು ಬೆಚ್ಚಗಿಟ್ಟಿದ್ದರು
ಮುಂದೊಂದು ದಿನ ಸಾಕ್ಷಿಯಾದೀತೆಂದು
ಡಂಗುರ ಬಡೆಯಲೆತ್ನಿಸುವ ಕೈಗಳಿಗೆ
ಕತ್ತಿ ಮೊನಚಿನಿಂದ ತಡಿಯಲಾಗುತ್ತಿತ್ತು
ನನ್ನವರು ತಾಳ್ಮೆಯನು ಹುಟ್ಟು ಹಾಕುತ್ತಿದ್ದರು

ನನ್ನವರು ಇನ್ನೂ ಜೀವಂತವಾಗಿದ್ದಾರೆ,
ಯಾರದೋ ಕಾಲಿನಲಿ ಪಾದುಕೆಯಾಗಿ,
ಭವ್ಯ ಬಂಗಲೆಯ ಗೋಡೆಯ ಮೇಲೆ
ಆಟಿಕೆಯಾಗಿ
ಉತ್ಸವ ಹೊರಡುವ ದೇವಾಲಯದ
ಮುಂಭಾಗದಲಿರುವ ನಗಾರಿಯಾಗಿ,
ರಣಬೀದಿಯ ನಾಟಕದ ಕಥಾವಸ್ತುವಾಗಿ

ಇನ್ನು ಕೆಲವು ಕಡೆ
ಹೀಗೆ,
ಹೆಣದಂತಿದ್ದರೂ ಉಸಿರುಸುತ್ತಿದ್ದಾರೆ.

‍ಲೇಖಕರು Avadhi

March 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: