ರೇಶ್ಮಾ ಗುಳೇದಗುಡ್ಡಾಕರ್ ಕವಿತೆ- ಅಪರಾಜಿತೆ

ರೇಶ್ಮಾ ಗುಳೇದಗುಡ್ಡಾಕರ್ 

ಕತ್ತಿಗಿಂತಲು ಹರಿತ
ಮಾತಿನ ಮೊನಚು
ತಿರಸ್ಕರಿಸಿದ ನೋಟ
ಹೃದಯವ ಕೊಚ್ಚಿಹಾಕಲು ಸಮಯವೇ
ಬೇಡ! ಎನ್ನುತ್ತಿದೆ.

ಬಯಲ ದೀಪದಂತಹ
ಬದುಕಿಗೆ ಗಾಳಿಗೆ ತೋರಿ
ಬಂದ ಮಾತುಗಳು
ಎದೆಯಲ್ಲೇ ಮುತ್ತಾಗಿ
ಕನಸುಗಳ ಕಾಲಿಗೆ ಚುಚ್ಚುವವು
ಮುಳ್ಳುಗಳಿಗಿಂತ ಆಳವಾಗಿ…

ಒಡಲ ಬೆಂಕಿ ಹೊತ್ತು
ಕಡಲಿಗೆ ಹೊಕ್ಕರು ಆರದು !
ಬಣ್ಣದ ಬಯಕೆಯ
ಅಲೆಗೆ ಮನದ ಗೋಡೆಯ
ಹೂ ಗಳು ಅರಳಿ ನಗುತಿಹವು…!!!
ಮಮತೆ ಇಲ್ಲದ ಮರಭೋಮಿಯಲ್ಲು
ಕಂಗೂಳಿಸಿತಿಹವು…!!!

ತೆರೆಯಲು ಹವಣಿಸಿದೆ
ಸಂತಸದ ಕದವ ಕಾಲ ಅನುಮತಿಯ
ಬೇಡಿ ಜೀವ.
ನಡೆದ ಹಾದಿಯೇಲ್ಲಾ ಗೋಡೆಗಳು
ಎದ್ದರು ಆಸರೆಯ ಬೆಳಕಿನ ಕಿರಣವ ಕಾಣಲು
ಛಲಬಿದೆ ಕಿಟಕಿ ಮಾಡಿತು ಭಾವ…

ಕಂಕುಳಲ್ಲಿ ಒಂದು, ಕೈಲ್ಲೊಂದು
ಹೀಡಿದು ಗಮ್ಯದ ದತ್ತ ನೋಟ ಹರಿಸುತ್ತಾ
ಸಾಗುವದು ಮನವು ಲೆಕ್ಕವಿಲ್ಲದಷ್ಟು
ಬಿಟ್ಟು ಸಾಗಿದ ಮಧುರ ನೆನಪುಗಳ ನೆರಳಲ್ಲಿ…!!
ಕಳೆದ್ದನ್ನು ಪಡೆಯುವ ಬಯಕೆಯಲಿ…
ಸಾಗುವದು ಮುಗ್ದ ಜೀವಗಳ ಅಪ್ಪಿ ಹೀಡಿದು
ಹಿರಿದ ಸೇರಗ ಹೊದ್ದುಕೊಂಡು…

‍ಲೇಖಕರು Avadhi

July 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: