‘ಬಹುರೂಪಿ’ ತುಳು ಪ್ರಕಟಣಾ ರಂಗವನ್ನು ಪ್ರವೇಶಿಸಿದೆ.
ಮೊದಲ ಪ್ರಕಟಣೆಯಾಗಿ ಅಕ್ಷಯ ಆರ್ ಶೆಟ್ಟಿ ಅವರ ಕಾದಂಬರಿ ‘ದೆಂಗ’ ಪ್ರಕಟವಾಗಿದೆ.
ತುಳುನಾಡಿನ ಕುಟುಂಬಗಳ ಸ್ಥಿತ್ಯಂತರವನ್ನು ಚಿತ್ರಿಸುವ ಈ ಕಾದಂಬರಿಯ ಹಸ್ತಪ್ರತಿಗೆ ಉಡುಪಿಯ ತುಳುಕೂಟ ಎಸ್ ಯು ಪಣಿಯಾಡಿ ಪ್ರಶಸ್ತಿಯನ್ನು ಘೋಷಿಸಿತ್ತು.
ಭಾನುವಾರ ಉಡುಪಿಯಲ್ಲಿ ಜರುಗಿದ ಸಮಾರಂಭದಲ್ಲಿ ಅಕ್ಷಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಸುರೇಶ್ ಶೆಟ್ಟಿ ಗುಮೆ೯, ಕೆ ಎಲ್. ಕುಂಡಂತಾಯ, ಡಾ. ಮಾಧವ ಎಂ ಕೆ, ಯು. ವಿಶ್ವನಾಥ ಶೆಣೈ ಭಾಗವಹಿಸಿದ್ದರು. ಉಡುಪಿ ತುಳುಕೂಟದ ಅಧ್ಯಕ್ಷರಾದ ಬಿ ಜಯಕರ ಶೆಟ್ಟಿ ಇಂದ್ರಾಳಿ ಅವರು ಅಧ್ಯಕ್ಷತೆ ವಹಿಸಿದ್ದರು.
0 ಪ್ರತಿಕ್ರಿಯೆಗಳು