ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ೨೦೨೦ನೇ ಸಾಲಿನ ʻಪುಸ್ತಕ ರತ್ನʼ ಪ್ರಶಸ್ತಿಗೆ ʻಬಹುರೂಪಿʼ ಆಯ್ಕೆಯಾಗಿದೆ.
ಪುಸ್ತಕ ಪ್ರಕಾಶನದಲ್ಲಿ ವಿಭಿನ್ನತೆಯನ್ನು ಮೆರೆದಿರುವ ʻಬಹುರೂಪಿʼಗೆ ಲಭಿಸಿರುವ ಪ್ರಶಸ್ತಿ ನಗದು ರೂ.೧೦,೦೦೦, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ಡಿಸೆಂಬರ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮತ್ತು ಕಾರ್ಯದರ್ಶಿ ಆರ್.ದೊಡ್ಡೇಗೌಡ ಅವರು ತಿಳಿಸಿದ್ದಾರೆ.
0 ಪ್ರತಿಕ್ರಿಯೆಗಳು