ಬಸವರಾಜ ಎಮ್ಮಿಯವರ ಕವಿತೆ – ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ…

ಬಸವರಾಜ ಎಮ್ಮಿಯವರ

ಅಮ್ಮ ಹೇಳಿದ್ದಳು
ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ

ಅವಳು ನನಗೆ
ಕೈ ತುತ್ತು ಇಟ್ಟಿದ್ದು
ಕನ್ನಡದಲ್ಲಿಯೆ
ಹಣೆಗೆ ಮುತ್ತಿಟ್ಟಿದ್ದು
ಕನ್ನಡದಲ್ಲಿಯೆ
ಜೋಗುಳ ಹಾಡಿದ್ದು
ಕನ್ನಡದಲ್ಲಿಯೆ

ಅವಳು ತನ್ನ
ಆಸೆ, ನಿರಾಸೆ,
ಬಯಕೆ, ಬೇಡಿಕೆ, ಭೀತಿ ಇತ್ಯಾಧಿ ಇತ್ಯಾಧಿಗಳನ್ನೆಲ್ಲ
ತನ್ನ ಒಡಲೊಳು ಹತ್ತಿಕ್ಕಿ
ನಕ್ಕಿದ್ದು ಮಾತ್ರ
ಕನ್ನಡದಲ್ಲಿಯೆ
ಮತ್ತೊಮ್ಮೆ ಹೇಳಿದಳು
ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ

ಇತ್ತೀಚೆಗೆ ಅವಳು
ನನ್ನದೊಂದು ಪ್ರಶ್ನೆಗೆ?
ಮಾತು ಬಾರದೇ
ನಗದೆ ನಿಂತಿದ್ದಾಳೆ!
ನಾನವಳಿಗೆ ಕೇಳಿಯೇ ಬಿಟ್ಟೆ
ಬರೀ ನಕ್ಕರೆ ನಡೆದೀತೇನ-ಅಮ್ಮ ಕನ್ನಡದಲ್ಲಿ
ಬದುಕಬೇಕಲ್ಲವೆ? ಯಾರ ಹಂಗೂ ಇಲ್ಲದೆ?
ನಮ್ಮವರ ಜೊತೆಯಲ್ಲಿ – ನಮ್ಮದೆ ನಾಡಿನಲ್ಲಿ

‘ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ’ ಅಂದರೆ ಸಾಕೇ?

‍ಲೇಖಕರು Admin

November 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: