ಬಡವನ ಬವಣೆ

ಮಹಾದೇವಿ ಪೂಜಾರಿ ಕರಗಾಂವ 

ಕುರಿ ಕಾಯುವ ಕಡು ಬಡವ
ಮಳೆಗಾಲದ ಮಳೆಯಲಿ ಮಿಂದಿರುವ
ನಿನ್ನ ನೋಡಿ ನನಗೆ ನೆನಪಾಯಿತು
ಬಡವ ಬದುಕಲೆ ಬೇಕು ಬೆಂದರು
ನಡುರಾತ್ರಿಯಲ್ಲಿ ನಿಂತಲ್ಲೆ ನಡುಗಿದೆ

ಮುದ್ದಾದ ಮೇಕೆ ಮರಿಯನ್ನು
ಮೈಗೊತ್ತಿಕೊಂಡು ಮುತ್ತೊಂದನ್ನು
ಕೊಟ್ಟು ಕರಿಕಂಬಳಿಯಲ್ಲಿ ಕೂರಿಸಿ
ಮಳೆರಾಯನ ಮುಖ ಮಿಟುಕಿಸಿದನು

ಬೆಳಗಾಗುವ ಬೆಳಕನ್ನು ಬಯಸಿ
ಸಂಸಾರದ ಸಂತೆಯನ್ನು ಸರಿದೂಗಿಸುವ
ಆಲೋಚನೆಯ ಆಕ್ಷೇಪಣೆ ಆಲಿಸಿ
ಹೊಸತನದ ಹೂರುಪನ್ನು ಹಂಬಲಿಸಿದನು

ಕತ್ತಲೆಯ ಕಾಡಲ್ಲಿ ಕೆಟ್ಟು ಕನಸು
ಬಿದ್ದಂತೆ ಭಾಸವಾಯಿತು ಬಾಳಲ್ಲಿ
ಕಣ್ಣಿನ ಕೆರೆಯಲ್ಲಿ ಕಣ್ಣಿರು ಕಾಣಿಸುವ
ಮುದ್ದಾದ ಮುಖದಲ್ಲಿ ಮುನಿಸೊಂದು ಮೂಡಿತ್ತು

‍ಲೇಖಕರು Avadhi

May 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: