ಬಟ್ಟೆಯೊಳಗಿನ ಬೆಂಕಿ ಸುಡುತ್ತಿದೆ

ಹಸಿವಿನ ದಾಹ

ಸುರೇಶ್ ರಾಜಮಾನೆ


ಕೆಂಡದುಂಡೆಯು ತಟ್ಟೆಯಲಿ
ಊಟ ಬಿಸಿ ಬಿಸಿ
ಕೈ ಹಾಕಿದರೆ ತಿರಸ್ಕರಿಸುವದು ನೋಡಿ
ಹಸಿವಿನ ದಾಹ
 
ಹೊಟ್ಟೆಗೆ ಹೆಚ್ಚಾಗುತಿದೆ
ಉಂಡೆಯ ಮೇಲೆ ಮೋಹ
ಬೆಂಕಿ ಆರಲಿಲ್ಲ
ಹಸಿವು ನೀಗಲಿಲ್ಲ, ಹೊಟ್ಟೆ ತಣ್ಣಗಾಗಲಿಲ್ಲ
 
ಬಟ್ಟೆಯೊಳಗಿನ ಬೆಂಕಿ
ಸುಡುತ್ತಿದೆ
ನಂದಿಸಲು ನೀರಿಲ್ಲ
ಬಂದಿಯಾಗಿದೆ ಬದುಕೆಲ್ಲ
 
ಬಡಿದುಕೊಳ್ಳುತ್ತಿದೆ ಬಾಯಿ ಬಗಳುವಂತೆ
ಎಸೆದ ಕಲ್ಲಿನ ಪ್ರೀತಿಯೊಳಗೆ ಬಿದ್ದ
ನಾಯಿ..
 
ಸಲುಗೆಯಲಿ ಸವರಿಕೊಂಡರೆ ಹೊಟ್ಟೆ
ಸವಾಲಾಗಿ ನಿಂತಿಹದು ಬಟ್ಟೆ
ಬದುಕೊಂದು ಬೆಳಕಾಗುವಷ್ಟರಲ್ಲಿ
ಮೊಳಕಾಲನೂರಿ ಬಿದ್ದಿತು ಬರೆ!!
 

‍ಲೇಖಕರು G

August 31, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಡಾ.ಶಿವಾನಂದ ಕುಬಸದ

    ಸುಂದರ ಕವಿತೆ, ಚೆನ್ನಾಗಿದೆ.

    ಪ್ರತಿಕ್ರಿಯೆ
    • suresh rajamane

      ತುಂಬಾ ಧನ್ಯವಾದಗಳು ಡಾ.ಕುಬಸದ್ ಸರ್.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: