ಹಸಿವಿನ ದಾಹ
ಸುರೇಶ್ ರಾಜಮಾನೆ
ಕೆಂಡದುಂಡೆಯು ತಟ್ಟೆಯಲಿ
ಊಟ ಬಿಸಿ ಬಿಸಿ
ಕೈ ಹಾಕಿದರೆ ತಿರಸ್ಕರಿಸುವದು ನೋಡಿ
ಹಸಿವಿನ ದಾಹ
ಹೊಟ್ಟೆಗೆ ಹೆಚ್ಚಾಗುತಿದೆ
ಉಂಡೆಯ ಮೇಲೆ ಮೋಹ
ಬೆಂಕಿ ಆರಲಿಲ್ಲ
ಹಸಿವು ನೀಗಲಿಲ್ಲ, ಹೊಟ್ಟೆ ತಣ್ಣಗಾಗಲಿಲ್ಲ
ಬಟ್ಟೆಯೊಳಗಿನ ಬೆಂಕಿ
ಸುಡುತ್ತಿದೆ
ನಂದಿಸಲು ನೀರಿಲ್ಲ
ಬಂದಿಯಾಗಿದೆ ಬದುಕೆಲ್ಲ
ಬಡಿದುಕೊಳ್ಳುತ್ತಿದೆ ಬಾಯಿ ಬಗಳುವಂತೆ
ಎಸೆದ ಕಲ್ಲಿನ ಪ್ರೀತಿಯೊಳಗೆ ಬಿದ್ದ
ನಾಯಿ..
ಸಲುಗೆಯಲಿ ಸವರಿಕೊಂಡರೆ ಹೊಟ್ಟೆ
ಸವಾಲಾಗಿ ನಿಂತಿಹದು ಬಟ್ಟೆ
ಬದುಕೊಂದು ಬೆಳಕಾಗುವಷ್ಟರಲ್ಲಿ
ಮೊಳಕಾಲನೂರಿ ಬಿದ್ದಿತು ಬರೆ!!
ಸುಂದರ ಕವಿತೆ, ಚೆನ್ನಾಗಿದೆ.
ತುಂಬಾ ಧನ್ಯವಾದಗಳು ಡಾ.ಕುಬಸದ್ ಸರ್.
nice..
Channagide..
thumba chennagide