ಸುವರ್ಚಲಾ ಅಂಬೇಕರ್ ಬಿ ಎಸ್
ಅವಳು ಪಟ್ಟ ಕಷ್ಟಗಳಿಗೆ ಎಣೆಯಿಲ್ಲ,
ಅವಳ ನೋವಿನ ಮಾತುಗಳಿಗೆ ಬೆಲೆಯಿಲ್ಲ
ಕ್ಷೀರಸಾಗರದಿಂದೆದ್ದು, ವಿಷಾನಿಲದ ಗುಹೆ ಹೊಕ್ಕಂತಾಗಿತ್ತು
ಬದುಕು
ಜೇನಿನ ಸವಿಯಂತಿತ್ತು ಆತನ ಪ್ರೀತಿ
ಮನ ಮೋಹಿಸಿದಂತೆ, ಕೆಂದುಟಿ ಚುಂಬಿಸಿದಂತೆ
ಸಂಸಾರವೆಂಬುಂದು ಸುಖ ಸಾಗರವೆಂದೇ ಎಣಿಸಿದ್ದಳಾಕೆ
ಪ್ರಪಂಚದಲ್ಲಿ
ಹೊತ್ತು ಕಳೆಯಿತು, ಕತ್ತಲಾವರಿಸಿತು ಧರೆಯನ್ನು
ಸಂಸಾರ ಸಾಗರದ ಧಗೆಯಲ್ಲಿ ಬಂಧಿಯಾಕೆ
ನಿಜ ಬಣ್ಣ ಬಯಲಾಯ್ತು, ಪರಿಸ್ಥಿತಿಯ ಅರಿವಾಯ್ತು
ಆದರೇನು ಮಿಂಚಿತ್ತು ಕಾಲ
0 ಪ್ರತಿಕ್ರಿಯೆಗಳು