ದಿನರಾತ್ರಿ
ಪ್ರವೀಣ್ ಕುಮಾರ್ ದೈವಜ್ಞಾಚಾರ್ಯ
ನನ್ನಪ್ಪನ ಸಿಡುಕಗಳನೆಲ್ಲ
ಊದುಗೊಳವೆಯಲಿಟ್ಟು
ಗಾಳಿ ಊದುತ್ತಾಳೆ -ನನ್ನವ್ವ
ಧಗಧಗನೆ ಉರಿದು
ಅನ್ನ ಬೇಯುವ ನೆಪದಲ್ಲಿ
ಸುಟ್ಟು ಬೂದಿಯಾಗುವವು ಸಿಟ್ಟುಗಳೆಲ್ಲ
ತಟ್ಟೆಯ ಮುಂದೆ
ಮಗುವಿನಂಥ ತಂದೆ
ತುತ್ತು ಮೆಲ್ಲುವಾಗ
ಸತ್ತ ಸಿಟ್ಟಿನ ಬೂದಿ
ನಗುತ್ತದೆ ಒಳಗೊಳಗೆ
ಹೊಗೆಯಾಡುತ್ತದೆ ಒಳ-ಹೊರಗೆ
ಈಗೀಗ ನನ್ನಪ್ಪನಿಗೆ ಸಿಟ್ಟು ಬರುವದಿಲ್ಲ
ಹಟ ಮಾಡುವದಿಲ್ಲ
ತಟ್ಟೆಯಲಿ ಅನ್ನವಿರುವಾಗಲೆ ಕೈತೊಳೆಯುವದಿಲ್ಲ
ಮಗುವಿನಂಥ ತಂದೆ
ತಟ್ಟೆಯ ಮುಂದೆ.







ನೆನಪಿನ ಬುತ್ತಿ
ಬಿಚ್ಚಿ ಹಂಚಿ ಉಂಡರೆಷ್ಟು ಮುದ……
ಸುಂದರವಾದ ರಚನೆ.:-)
Very nice poem praveenkumar.
ತುಂಬಾ ತುಂಬಾ ಚೆನ್ನಾಗಿದೆ.
🙂 super