ಹಿರಿಯ ಪತ್ರಕರ್ತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹಿಪಾಲರೆಡ್ಡಿ ಮುನ್ನೂರ್ ಅವರು ಕಲ್ಯಾಣ ಕರ್ನಾಟಕದಿಂದ ಹೊಸ ಸಾಹಿತ್ಯ ಪತ್ರಿಕೆ ‘ಋತುಮಾನ’ಆರಂಭಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ‘ಅವಧಿ’ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ.
ಎಡಿಟರ್ ಆಗ್ತಾ ಇದೀರಂತೆ ?
ಆ ದಾರಿಯಲ್ಲಿದ್ದೇನೆ.
ಪತ್ರಿಕೆ, ಚಾನಲ್ ರಿಪೋರ್ಟರ್ ಸ್ಥಾನದಿಂದ ಸಡನ್ನಾಗಿ ‘ಎಡಿಟರ್’ ಆಗಿ ಪ್ರಪೋಷನ್ ಹೇಗಾಯ್ತು ?
ನಮ್ಮೊಳಗಿನ ಕ್ರೀಯೇಟಿವಿಟಿಗೆ ಅದು ಪೂರಕ ಅನ್ಕೊಳ್ತೀನಿ.
ಕಲ್ಯಾಣ ಕರ್ನಾಟಕದಲ್ಲಿ ಇದು ಮೊದಲ ಸಾಹಸವಾ ?
ಇಲ್ಲ. ಇದನ್ನು ಹಿರಿಯರು ಮಾಡಿದ್ದು. ನಾನು ಮೂರು ಅಥವಾ ನಾಲ್ಕನೇ ದವನು ಅನ್ನಿಸುತ್ತೆ.
‘ಋತುಮಾನ’ ಅಂತಾನೇ ಯಾಕೆ ?
ಕಾಲಮಾನಕ್ಕೆ ತಕ್ಕಂತೆ ಬದಲಾವಣೆಯ ಸಂಕೇತವಾಗಿರೋದ್ರಿಂದ.
ಯಾವಾಗಿಂದ ರಂಗ ಪ್ರವೇಶ ?
ಬಹುಶಃ ಸೆಪ್ಟೆಂಬರ್ ಮೊದಲ ವಾರ.
0 ಪ್ರತಿಕ್ರಿಯೆಗಳು