**
ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ
ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ ಕಥಾಸ್ಪರ್ಧೆ – 2024
ಹೊಸ ಕಥೆಗಾರರನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಪ್ರತಿ ವರ್ಷದಂತೆ ಹುಬ್ಬಳ್ಳಿಯ ‘ಅಕ್ಷರ ಸಾಹಿತ್ಯ ವೇದಿಕೆ’ ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ ‘ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾಸ್ಪರ್ಧೆ – 2024’ ನ್ನು ಏರ್ಪಡಿಸಿದೆ. ನಾಡಿನ ಎಲ್ಲ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ವಿಜೇತ ಒಂದು ಕಥೆಗೆ ರೂ.5000/- ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಲಭಿಸಲಿದ್ದು, ಡಾ. ಪ್ರಹ್ಲಾದರ ಜನ್ಮದಿನವಾದ ಜೂನ್ 3 ರಂದು ಬಹುಮಾನವನ್ನು ವಿತರಿಸಲಾಗುವುದು ಎಂದು ‘ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಉದಯೋನ್ಮುಖ ಕಥೆಗಾರರು ತಮ್ಮ ಕಾಲೇಜಿನ ಮುಖ್ಯಸ್ಥರಿಂದ ಪಡೆದ ‘ನಮ್ಮ ಕಾಲೇಜಿನ ವಿದ್ಯಾರ್ಥಿ/ನಿ’ ಎಂಬ ದೃಢೀಕೃತ ಪ್ರಮಾಣ ಪತ್ರದೊಂದಿಗೆ ತಮ್ಮ ಅಪ್ರಕಟಿತ, ಸ್ವರಚಿತ ಕಥೆಯೊಂದನ್ನು ಕಳುಹಿಸಬೇಕು.
*ವಿ.ಸೂ* : ಕಥೆಯನ್ನು ಕಾಗದದ ಒಂದೇ ಮಗ್ಗುಲಿಗೆ ಕಾಗುಣಿತ ತಪ್ಪಿಲ್ಲದೇ ಶುದ್ಧವಾಗಿ ಬರೆದು ಕಳಿಸಿ ಅಥವಾ ಟೖಪ್ ಮಾಡಿ ಕಳಿಸಿ. ಮೇಲ್ ಮೂಲಕವೂ ಕಥೆಯನ್ನು ಸ್ವೀಕರಿಸುತ್ತೇವೆ. ಮೇಲ್ ಜೊತೆಯಲ್ಲೂ ದೃಢೀಕೃತ ಪ್ರಮಾಣ ಪತ್ರದ ಲಗತ್ತಿರಲಿ.
“ಕಥೆ ಕಳುಹಿಸಲು ಕೊನೆಯ ದಿನಾಂಕ:20 ಎಪ್ರಿಲ್ 2024“
ಕಥೆ ಕಳುಹಿಸಬೇಕಾದ ವಿಳಾಸ.
ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ ಕಥಾ ಸ್ಪರ್ಧೆ, ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ, c/o ಸುನಂದಾ ಪ್ರಕಾಶ ಕಡಮೆ, # 90, ನಾಗಸುಧೆ, 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ -580 031, ದೂರವಾಣಿ : 98457 79387 ಮೇಲ್ ವಿಳಾಸ : [email protected]
0 ಪ್ರತಿಕ್ರಿಯೆಗಳು