ಪ್ರಮೋದ ಜೋಶಿ ಕವಿತೆ- ಹೇಳು ನೀ ಪಾಠ…

ಪ್ರಮೋದ ಜೋಶಿ

ಸಾಲು ಮರಗಳ ಹೆಣಗಳ ಸಾಲು
ರೆಸ್ತೆಯ ಆಚೆ ಇಚೆಗೆ
ನೋಟಾವರ್ತಿಯಲ್ಲಾ ಬಯಲೇ ಬಯಲು
ಕಣ್ಣಿಗೆ ಕಾಣದು ಹಸಿರು

ಹಸಿರಿದ್ದರೆ ನಮಗೆ ಉಸಿರು
ತತ್ವದ ಮರೆತರೆ ಹೇಗೆ?
ಉಸಿರು ನೀಡುವ ಬಸಿರನು ಕಡಿದರೆ
ಬದುಕಿಲ್ಲಾ ನಮಗೆ ಅವನಿಯೊಳಗೆ

ಸತ್ತ ಮರಗಳ ಅಂಗ ಕೀಳುತಿವೆ
ಹಾರದ ಹದ್ದುಗಳ ದಂಡು
ಕಂಡೂ ಕಂಡೂ ಸುಮ್ಮನೆ ಕುಳಿತಿಹೆವು
ಮರಗಳ ಕಡಿಯುವದ ಕಂಡು

ಅಧುನೀಕರಣದ ಯಜ್ಞಕುಂಡಕೆ
ಮೂಕ ಮರಗಳ ಆಹುತಿ
ದುರಾಸೆಯಲಿ ಪ್ರಕೃತಿ ಮರತರೆ
ವಿನಾಶವೇ ನಮ್ಮ ಮುಂದಿನ ಸ್ಥಿತಿ

ನೆರಳು ನೀಡಿ ಬಾನಾಡಿ ಸಲುಹಿ
ವರುಷಗಳಿಂದಾ ಬಾಳಿದಾ ಮರ
ಕ್ಷಣದೊಳಗಾಯಿತು ಧರಾಶಾಯಿ
ವಿರೋಧಿಸಲೂ ಬಾರದ ಬಡಪಾಯಿ

ಅರೆ ಕಡೆದ ರೆಂಬೆ ಕೊಂಬೆಗಳಲ್ಲಿ
ಮತ್ತೆ ಚಿಗುರುವ ಹುನ್ನಾರು
ನೀ ಕಡಿದರೆ ನಾ ಚಿಗುರುವೆ
ಎಂದು ನೀಡುತಿದೆ ಮರು ಉತ್ತರ

ಅರಿಯುವನೇ ನಿನ್ನ ಉತ್ತರ
ತನ್ನ ಕುಲವನ್ನೇ ಮರೆತಿರಲು
ನಿನ್ನ ತನುವ ಅಳಿಸಿ ತಾನು
ಮೆರೆವ ಜಗದಿ ತನಗೇ ತಾನು

ತೋರು ನೀ ಪ್ರತಾಪ
ನೀಡು ನೀ ದಿಟ್ಟುತ್ತರ
ನೀನನಗಿದ್ದರೆ ನಾ ನಿನಗೆ ಎಂದು
ಹೇಳು ಉಕ್ತಿ ಹೇಳುವ ಪಾಠ

‍ಲೇಖಕರು Admin

June 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: