ಅನುಪಮಾ ಪ್ರಸಾದ್
“ನಾನು ಅಲ್ಲಿ ಯಾಕೆ ಅತ್ತಿತ್ತ ಸುತ್ತುತ್ತಿದ್ದೆನೆಂದರೆ, ನಾನು ಆ ಸ್ಥಳಕ್ಕೆ ಒಂದು ರೀತಿಯ ವಿದಾಯ ಹೇಳಲು ಪ್ರಯತ್ನಿಸುತ್ತಿದ್ದೆ. ನಾನು ಹೇಳುವುದೇನೆಂದರೆ, ನಾನು ಎಷ್ಟೋ ಶಾಲೆಗಳನ್ನು ಹಾಗು ಸ್ಥಳಗಳನ್ನು, ಅವುಗಳನ್ನು ಬಿಡುತ್ತಿದ್ದೇನೆ ಎನ್ನುವುದು ಗೊತ್ತಿರದೇ ಬಿಟ್ಟಿದ್ದೇನೆ. ನಾನು ಅಂಥದ್ದನ್ನು ದ್ವೇಷಿಸುತ್ತೇನೆ. ಅದು ಒಳ್ಳೆಯ ವಿದಾಯವಾಗಿರಲಿ, ಕೆಟ್ಟ ವಿದಾಯವಾಗಿರಲಿ ಆ ಬಗ್ಗೆ ಚಿಂತಿಸುವುದಿಲ್ಲ. ಆದರೆ, ಒಂದು ಜಾಗೆಗೆ ವಿದಾಯ ಹೇಳುವಾಗ, ನನ್ನ ಮನಸ್ಸು ಹಾಗು ಹೃದಯಕ್ಕೆ ಗೊತ್ತಾಗಬೇಕು. ಆ ರೀತಿ ಅನಿಸದೇ ಹೋದಲ್ಲಿ, ಅಂಥ ಸ್ಥಿತಿ ಇನ್ನೂ ಕೆಟ್ಟದ್ದು.”
ಇದು ಎಸ್.ಎಫ್. ಯೋಗಪ್ಪನವರ್ ಅನುವಾದಿಸಿದ `ಹದಿ ಹರೆಯದ ಒಬ್ಬಂಟಿ ಪಯಣ’ದಲ್ಲಿ ಬರುವ ಮಾತು.
ಮೂಲ ಲೇಖಕ J.D.Salinger. ಈ ಕಾದಂಬರಿಯ ಹೆಸರು Catcher in the rye. ಪುಸ್ತಕದ ಪ್ರತಿ ಪುಟದಲ್ಲು ಮತ್ತೆ ಮತ್ತೆ ಓದುವಂತಹ ಇಂತಹ ಸಾಲುಗಳು! ಹೀಗೆ ಹೇಳುವ ಬದಲು ಹಾಗೆ ಹೇಳಬಹುದಿತ್ತು ಎಂದನಿಸಲು ಸಾಧ್ಯವೇ ಇಲ್ಲದಂತಹ ಸಾಲುಗಳು. ಅಂದ ಹಾಗೆ ಈ ಲೇಖಕ ಬರೆದಿದ್ದು ಹೌದೇ ಹೌದು ಅನಿಸುವಂತಹ ಅಮೂಲ್ಯವಾದ ಒಂದು ಕಾದಂಬರಿ. ಇದು “ಪಲ್ಲವ ಪ್ರಕಾಶನ”ದ ಕೃತಿ.
0 ಪ್ರತಿಕ್ರಿಯೆಗಳು