ಪರಮ ದಯಾಳುವಿನ ಪದತಳದಲ್ಲಿ…

ರೂಪ ಹಾಸನ

ಪರಮ ದಯಾಳುವಿನ
ಪದತಳದಲ್ಲಿ ನೆಲೆಸುವುದೆಂದರೆ…..

ಈ ಮಾನುಷ ಅಂಗಾಂಗಗಳೆಂಬ
ಯಾವ ವಾಹಕಗಳ ಹಂಗಿಲ್ಲದೇ
ಮನೋಕಾಮನೆಗಳೆಲ್ಲವೂ
ತನ್ನಷ್ಟಕ್ಕೇ ಈಡೇರಿಬಿಡುವ ಹಂತ
ಆಖೈರಿನ ಪರಮಸುಖ.

ಆಡುವ ಮೊದಲೇ ಅರಿವ
ಕರುಣಾಳು ಇಂಗಿತಜ್ಞತೆಯೆದುರು
ಮಾತುಗಳು ಅಗ್ನಿಕುಂಡಕ್ಕೆ ಆಹುತಿ
ನಾಲಿಗೆ ಜೀವಂತ ಸಮಾಧಿ.

ಬೇಡುವ ಮೊದಲೇ
ನೀಡುವ ಕಾರುಣ್ಯದ
ಅಭಯಹಸ್ತವಿರುವಾಗ
ಕೈಗಳಿಗೆಲ್ಲಿದೆ ಮುಗಿವ ಉಸಾಬರಿ?

ಕಂಡದ್ದು ಕಾಣದಿರುವುದೆಲ್ಲಾ
ಅಶರೀರ ದೃಷ್ಟಿಗೆ ಗೋಚರಿಸಿ
ಕಾಣ್ಕೆಗಳಾಗಿ
ಥಟ್ಟನೆ ಜಗದ ತುಂಬ
ಆವರಿಸಿ ಮುತ್ತುಗಳಾಗುವಾಗ
ಕಣ್ಣು ಮತ್ತದರ ನೋಟ ಯಾಕೆ ಬೇಕು?

ಮಾತಾಗಿ ಕುಡಿಯೊಡೆಯದ
ಸಂಚಾರಿ ಭಾವಗಳನೂ
ಎದೆಯಿಂದ ಎದೆಗೇ ತಲುಪಿಸುವ
ನಿಸ್ತಂತು ವಾಹಕದ ದಯೆಯಿರುವಾಗ
ಕಿವಿಗಳೂ ನಿಷ್ಕ್ರಿಯ!

ಪರಮ ದಯಾಳುವಿನ
ಪದತಳದಲ್ಲಿ ನೆಲೆಸುವುದೆಂದರೆ……
ನಿಯಮವೊಂದೇ,
ಸದಾ ಸನ್ನದ್ಧವಾಗಿರಬೇಕು
ನಿಶ್ಯಬ್ದದ ಸಂಕೇತಗಳೆಳೆ ಸ್ವೀಕರಿಸಲು.

ಕಡ್ಡಾಯವೆಂದರೆ…..
ಪದತಳದಲ್ಲಿಯೇ ಇರಬೇಕು!

‍ಲೇಖಕರು avadhi

December 7, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Parvathi Aithal

    ಪರಮ ದಯಾಳು ಕವನದಲ್ಲಿ ಲೌಕಿಕತೆಯನ್ನು ನಿರಾಕರಿಸಿ ಔನ್ನತ್ಯಕ್ಕೇರಬೇಕೆನ್ನುವ ತುಡಿತ ಚೆನ್ನಾಗಿ ಬಂದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: