ಬೆಂಗಳೂರಿನ ನಯನ ಸಭಾಂಗಣದಲ್ಲಿ ಭಾಗವತರು ಸಾಂಸ್ಕೃತಿಕ ಸಂಘಟನೆ ಸಹಯೋಗದಲ್ಲಿ ಕೆ ರೇವಣ್ಣ ಅವರ ‘ಪಂಚರಂಗಿ’ ಐದು ಹೊಸ ನಾಟಕಗಳ ಸಂಗ್ರಹ ಕೃತಿಯನ್ನು ಪತ್ರಕರ್ತ ಮತ್ತು ಪ್ರಕಾಶಕರು ಜಿ ಎನ್ ಮೋಹನ್ ಬಿಡುಗಡೆ ಮಾಡಿದರು.
ಕೃತಿಯ ಬಗ್ಗೆ ಹಿರಿಯ ರಂಗ ನಿರ್ದೇಶಕರು ಶಶಿಧರ್ ಬಾರಿಘಾಟ್ ಮಾತನಾಡಿದರು. ಖ್ಯಾತ ಲೇಖಕರು ಮತ್ತು ರಾಜ್ಯಸಭಾ ಸದಸ್ಯರು ಡಾ ಎಲ್ ಹನುಮಂತಯ್ಯ ಅಧ್ಯಕ್ಷತೆ ವಹಿಸಿದ್ದರು. ರಂಗಸಂಘಟಕ ಮತ್ತು ಪ್ರಕಾಶಕರು ಬಿ ಎಸ್ ವಿದ್ಯಾರಣ್ಯ ಇದ್ದರು.
ಇನ್ನು ಈ ಸಂದರ್ಭದಲ್ಲಿ ಡಾ ಬಸವರಾಜ್ ಸಬರದ, ಡಾ ರಾಜಪ್ಪ ದಳವಾಯಿ, ಪ್ರೇಮಾ ಬದಾಮಿ, ಸದಾಶಿವನಗೌಡ ಕಬ್ಬೂರ, ಮಹದೇವ ಗುಟ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.
0 ಪ್ರತಿಕ್ರಿಯೆಗಳು