ನೀ ಎನ್ನ ಬುದ್ಧ ಕಾರುಣ್ಯ..

ಎನ್. ರವಿಕುಮಾರ್ ಟೆಲೆಕ್ಸ್

ದೇವರಲ್ಲ ಈ ಜಂಗಮ
ಅನ್ನ ಕಾಣ, ಜ್ಞಾನ ಕಾಣ
ಧರ್ಮ ಕಾಣ.

ಗುರುವಷ್ಟೆ ಅಲ್ಲ ಈ ಅಜ್ಜ
ಒಳಮನೆಯ ಹಣತೆ
ಎದೆಗೂಡ ಕತ್ತಲಿಗೆ
ಚೆಂಬೆಳಕು – ತಂಬೆಳಕು

ಆಡಿದ ಮಾತೆಲ್ಲ ಲಿಂಗವಾಯ್ತು
ನಡೆದಾಡಿದ ನೆಲವೆಲ್ಲ ಸಂಗಮವಾಯ್ತು
ಕುಲವಿಲ್ಲ- ಹಲವಿಲ್ಲ
ಕಾಯಕದ ಕಾಯದೊಳಗೆ
ಜಗದೊಡೆಯ ಜಂಗಮರೂಪಿ

ಅಗುಳಗುಳು ಜೀವಧ್ಯಾನ
ಪದ ಪದವೂ ಜ್ಞಾನ ಧ್ಯಾನ
ನಿಮ್ಮ ಸಂಗವೆಂದರೆ
ಚುಳುಕಾಗಿ ಅಂಗದಲ್ಲಿ ಕುಳಿತ ಲಿಂಗ ಪೂಜೆ ಅಯ್ಯ.

ಧರ್ಮ ಮುಡಿದವರಲ್ಲ
ಧರ್ಮ ನಡೆದವರು
ನಡೆ- ಮುಡಿ ಒಂದಾದ
ದೇಹ ಗುಡಿ
ದೇವರೆಂದರೂ ಕಿರಿದಾದೀತು
ಹಿರಿದಪ್ಪ ಕೂಡಲ ಸಂಗನ ಬಸವಣ್ಣ
ಎನ್ನೊಡೆಯ ನೀ ಎನ್ನ
ಬುದ್ಧ ಕಾರುಣ್ಯ
ನಿನಗೆ ಶರಣು ಶರಣಾರ್ಥಿ.

‍ಲೇಖಕರು avadhi

January 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: