ನಿನ್ನನ್ನು ಮರೆತು ನಮಾಜನ್ನೆ ಆರಾಧಿಸ ತೊಡಗಿದ್ದಾರೆ – ಬಿ ಎಂ ಬಶೀರ್

ನೀನೊಬ್ಬನಿದ್ದೀಯೆಂದು…

ಬಿ ಎಂ ಬಶೀರ್

ಗುಜರಿ ಅಂಗಡಿ

1

ನನ್ನ ದೊರೆಯೇ

ಧರ್ಮ ಪಂಡಿತರು

ನಿನ್ನ ಆರಾಧನೆಗೆಂದು

ನಮಾಜಿಗೆ ನಿಂತರು

ಇದೀಗ ನಿನ್ನನ್ನು ಮರೆತು

ನಮಾಜನ್ನೆ ಆರಾಧಿಸ ತೊಡಗಿದ್ದಾರೆ

ಹಣ್ಣು ಕೊಯ್ಯಲೆಂದು

ಮರಕ್ಕೆ ಏಣಿ ಇಟ್ಟವರು

ಹಣ್ಣನ್ನು ಮರೆತು

ಏಣಿಯನ್ನೇ ತಬ್ಬಿಕೊಂಡಿದ್ದಾರೆ…!

2

ಧರ್ಮ ಪಂಡಿತರು

ನಿನ್ನ ನೆನೆದು

ಭಯ ಪೀಡಿತರಾಗಿದ್ದಾರೆ

ನನ್ನ ದೊರೆಯೇ…

ನಾನೋ ಅಜ್ಞಾನಿ,

ನೀನೋಬ್ಬನಿದ್ದೀಯೆಂದು

ನಿರ್ಭಯನಾಗಿದ್ದೇನೆ…

3

ಸೈತಾನನಿಗೆಂದು ಎಸೆದ ಕಲ್ಲು

ಅವನ ಬೆರಳ ಉಗುರನ್ನೂ ನೋಯಿಸಲಿಲ್ಲ…

ಕಳ್ಳ ನಮ್ಮ ಮನೆಯ

ಅಡುಗೆ ಕೋಣೆಯಲ್ಲಿ

ಬಚ್ಚಿಟ್ಟು ಕೊಂಡಿದ್ದಾನೆ

ನಾವೋ ಮನೆಯಂಗಳದಲ್ಲಿ

ಅವನನ್ನು ಹುಡುಕುತ್ತಿದ್ದೇವೆ…

‍ಲೇಖಕರು G

November 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: