ನೀನೊಬ್ಬನಿದ್ದೀಯೆಂದು…
ಬಿ ಎಂ ಬಶೀರ್
ಗುಜರಿ ಅಂಗಡಿ
1
ನನ್ನ ದೊರೆಯೇ
ಧರ್ಮ ಪಂಡಿತರು
ನಿನ್ನ ಆರಾಧನೆಗೆಂದು
ನಮಾಜಿಗೆ ನಿಂತರು
ಇದೀಗ ನಿನ್ನನ್ನು ಮರೆತು
ನಮಾಜನ್ನೆ ಆರಾಧಿಸ ತೊಡಗಿದ್ದಾರೆ
ಹಣ್ಣು ಕೊಯ್ಯಲೆಂದು
ಮರಕ್ಕೆ ಏಣಿ ಇಟ್ಟವರು
ಹಣ್ಣನ್ನು ಮರೆತು
ಏಣಿಯನ್ನೇ ತಬ್ಬಿಕೊಂಡಿದ್ದಾರೆ…!
2
ಧರ್ಮ ಪಂಡಿತರು
ನಿನ್ನ ನೆನೆದು
ಭಯ ಪೀಡಿತರಾಗಿದ್ದಾರೆ
ನನ್ನ ದೊರೆಯೇ…
ನಾನೋ ಅಜ್ಞಾನಿ,
ನೀನೋಬ್ಬನಿದ್ದೀಯೆಂದು
ನಿರ್ಭಯನಾಗಿದ್ದೇನೆ…
3
ಸೈತಾನನಿಗೆಂದು ಎಸೆದ ಕಲ್ಲು
ಅವನ ಬೆರಳ ಉಗುರನ್ನೂ ನೋಯಿಸಲಿಲ್ಲ…
ಕಳ್ಳ ನಮ್ಮ ಮನೆಯ
ಅಡುಗೆ ಕೋಣೆಯಲ್ಲಿ
ಬಚ್ಚಿಟ್ಟು ಕೊಂಡಿದ್ದಾನೆ
ನಾವೋ ಮನೆಯಂಗಳದಲ್ಲಿ
ಅವನನ್ನು ಹುಡುಕುತ್ತಿದ್ದೇವೆ…
chennagive..hanchikondiddakke dhnyavaadagaLu.
itteettechege naanu ninnannee arradhisalaarambissiddene.