ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿದ್ದೆಯೂ ಸವಿಗನಸಾಗುವುದಾದರೆ..

ಕಿಡಿ

mallikarjuna gowda tulahalli

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಕಾಣದ ಕಿಡಿ ತಾಗಿ
ಸುಡುತ್ತಲೇ ಇದೆ
ಮಣ್ಣು ಕಾಯ

ಕುಂಬಾರನ ಆವುಗೆಯಂತೆ
ನೆಲ ಕಾದು
ಒಡಲು ಬೆಂದು
ಕೊಟ್ಟ ರೂಪು
ಕೊರೆದ ಚಿತ್ರಗಳೆಲ್ಲಾ
ಸ್ಥಿರವಾಗುವುದಾದರೆ

treeನೆಲದ ಪೈರು ಊರ ಸಂತೆ
ಉಂಬುವ ಒಡಲು
ವಿಷ ಕಳೆದು
ಕೆಂಡದ ಹೂವಿನ ಪಾತ್ರೆಯಲಿ
ಜ್ವಲಿಸುವ ಬಂಡು
ಬಾಳಾಗುವುದಾದರೆ
ತಾಗುತ್ತಲೇ ಇರಲಿ ಕಿಡಿ

ವಿಷ ವಿಷಮ ಮಾತು
ವಿಷ ವಿಷಯದ ತೂತು
ಮುಚ್ಚಲಿ
ರಸ್ತೆಗಳು ವಿಹಾರಗಳಾಗಲಿ

ಅಧ್ಯಕ್ಷರೇ ಬೇಡದೆ
ಪಾರ್ಲಿಮೆಂಟಿನ
ಕುರ್ಚಿಗಳೆಲ್ಲಾ ಮಕ್ಕಳಾಗಿ
ಆಡಿ ದಣಿದು
ನಿದ್ದೆಯೂ ಸವಿಗನಸಾಗುವುದಾದರೆ

ಆಗೊಂದು
ನಿಜ ಬೆಳಗು
ಬೆರಗು

ನಂಬಿ ಉಸಿರಾಡಬಹುದಾದ
ಗಾಳಿ
ಬೀಸುವುದಾದರೆ

ತಾಗುತ್ತಲೇ ಇರಲಿ
ಕಿಡಿ

‍ಲೇಖಕರು Admin

20 June, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading