ಮೂಲ : ಗುಲ್ಜಾರ್
ಕನ್ನಡಕ್ಕೆ : ಸೂರ್ಯಕೀರ್ತಿ
ಒಂದು ಕ್ಷಣ ಕುಳಿತುಕೊಂಡು
ನಮ್ಮ ದೇಶದ ಬಗ್ಗೆ ಮಾತನಾಡೋಣವೇ?
ಭರವಸೆಯೊಂಬುದು ಸುಂಟರಗಾಳಿಯಲ್ಲಿ
ಮತ್ತೆ ಮತ್ತೆ ಮುಳುಗಿದ ನಂಬಿಕೆಗಳ ಬಗ್ಗೆ?
ಭರವಸೆಯ ಗಾಳಿಯಲ್ಲಿ ಹಡುಗುಗಳು ತುರಾಡುತ್ತಿದ್ದರು;
ಇದನ್ನೆ ಬಯಸುವ,
ಕೊಲೆ ಲೂಟಿ ಮಾಡುವವರ ಬಗ್ಗೆ
ನಾವು ಮಾತನಾಡೋಣವೇ ಮತ್ತೆ?
ಹಿಂದೆ ಏನನ್ನು ಸಾಧಿಸಲಾಗಿಲ್ಲ
ಎಂಬುದೂ ಅಲ್ಲ
ಆದರೆ ಇಂದಿನ ವರ್ಷಗಳಲ್ಲಿ ?
ಆಕಾಶವನ್ನು ನೋಡಿದಷ್ಟು
ಸೂರ್ಯನಿಗೆ ಮೆತ್ತಿರುವ ಕೊಳೆಯ ಮಳೆ
ಹೊಳೆಯುತ್ತಲೆ ಇದೆ!
ಪ್ರತಿದಿನ ನಾವು ಆಕಾಶವನ್ನು
ಧೂಳೀಕರಿಸುತ್ತೇವೆ!
ಒಮ್ಮೆ ಪ್ರಯತ್ನಿಸೋಣವೇ ಸ್ವಚ್ಛಗೊಳಿಸಲು?
ಕೊಡಲಿಯ ಪೆಟ್ಟು ನಮ್ಮ ಪಾದಗಳ ಮೇಲೆಯೇ
ಹೊಡೆಯುತ್ತದೆ;
ಆದರೆ ನಾವು ಇನ್ನೂ ರಕ್ತವನ್ನು ನೆನಸಿದ ಪಾದಗಳಿಂದ ಮೆಟ್ಟಿಲುಗಳನ್ನು
ಏರುತ್ತಲೇ ಇದ್ದೇವೆ?
ಮೊಣಕಾಲು ಆಳದ ಹೂಳುನೆಲದಿಂದ
ಹೊರಬರಬಹುದೇ ನಾವು?
ಆದರೂ, ಏಕೆ ನಾವು ಆ ಸ್ವರ್ಗದ ಬಗ್ಗೆಯೇ
ಮಾತನಾಡುತ್ತೇವೆ?
ವಾಸ್ತವ ಕಾಣುವುದಿಲ್ಲವೇ?
ಬನ್ನಿ, ಆದ್ದರಿಂದ ನಾವು ಜೊತೆಯಲಿ ನಡೆಯೋಣ
ಒಂದಷ್ಟು ನಮ್ಮ ದೇಶದ ಬಗ್ಗೆ ಮಾತನಾಡೋಣ!
0 ಪ್ರತಿಕ್ರಿಯೆಗಳು