ಕರ್ನಾಟಕ ಸಾಹಿತ್ಯ ಅಕಾಡೆಮಿಯು 2015ರ ಜುಲೈ 14, 15 ಮತ್ತು 16 ರಂದು ದಾವಣಗೆರೆಯ ಬಳಿಯ ದೊಡ್ಡ ಬಾತಿಯ ತಪೋವನ ತರಬೇತಿ ಸಂಸ್ಥೆಯಲ್ಲಿ ವಸತಿ ಸಹಿತ ಮೂರು ದಿನಗಳ ರಾಜ್ಯಮಟ್ಟದ “ ನಾಟಕ ಸಾಹಿತ್ಯ ಸಂವೇದನಾ ಶಿಬಿರ ‘’ ವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.
• ರಾಜ್ಯದ ಯಾವುದೇ ಜಿಲ್ಲೆಗೆ ಸೇರಿರುವ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
• 20 ರಿಂದ 40ರ ವಯೋಮಿತಿಯಲ್ಲಿರುವವರು ಮಾತ್ರ ಅರ್ಜಿ ಹಾಕಬೇಕು.
• ಆಸಕ್ತ ಅಭ್ಯರ್ಥಿಗಳು ರಂಗಸಾಹಿತ್ಯ, ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ವಿಶ್ವಾಸಾರ್ಹ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
• ವಯಸ್ಸಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪಟ್ಟಿಯನ್ನು ಲಗತ್ತಿಸಬೇಕು.
• ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಮೂರು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು.
• ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ ನಾಟಕ ಸಾಹಿತ್ಯ ಸಂವೇದನಾ ಶಿಬಿರ” ಕ್ಕೆ ಅರ್ಜಿ ಎಂದು ನಮೂದಿಸಿರಬೇಕು.
• ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದುಹೋಗಲು ರಾಜಹಂಸ ಬಸ್ ದರವನ್ನು ನೀಡಲಾಗುವುದು. ಹಾಗೂ ಮೂರು ದಿನಗಳು ಊಟ, ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು.
• ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ ಸೈಟ್ ನಿಂದ ಪಡೆದುಕೊಳ್ಳಬಹುದು.
• ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಜುಲೈ ಮೊದಲ ವಾರದಲ್ಲಿ ಅಕಾಡೆಮಿಯ ವೆಬ್ ಸೈಟ್
http://karnatakasahithyaacademy.org ನಲ್ಲಿ ಪ್ರಕಟಿಸಲಾಗುವುದು.
• ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-6-2015
• ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಪ್ರೊ. ಎಚ್.ಎಸ್. ಉಮೇಶ್
ನಾಟಕ ಸಾಹಿತ್ಯ ಸಂವೇದನಾ ಶಿಬಿರದ ನಿರ್ದೇಶಕರು
ಕೇರಾಫ್/ ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
(080-22211730/ 22106460)
1983ರಲ್ಲಿ ಡಾ. ಚಂದ್ರಶೇಖರ ಕಂಬಾರ ಅವರು ಅಧ್ಯಕ್ಷರಾಗಿದ್ದಾಗ, ಕರ್ನಾಟಕ ನಾಟಕ ಅಕಾಡೆಮಿ ದಾವಣಗೆರೆ ಸಮೀಪದ ಕೊಂಡಜ್ಜಿಯಲ್ಲಿ ಒಂದು ನಾಟಕ ರಚನಾ ಶಿಬಿರವನ್ನು ಏರ್ಪಡಿಸಿತ್ತು. ನಿರ್ದೇಶಕ, ನಾಟಕಕಾರ ಪ್ರಸನ್ನ ಆ ಶಿಬಿರದ ಸಾರಥ್ಯ ವಹಿಸಿಕೊಂಡಿದ್ದರು. ಸುಮಾರು ಹತ್ತು ದಿನಗಳ ಆ ಶಿಬಿರಕ್ಕೆ ಅನ್ಯ ಭಾಷೆಗಳ ನಾಟಕಕಾರರನ್ನು ಒಳಗೊಂಡಂತೆ ಎಲ್ಲ ರಂಗತಜ್ಞರನ್ನು ಆಹ್ವಾನಿಸಲಾಗಿತ್ತು. ನಾಟ್ಕ ರಚನಾ ತಂತ್ರಗಳ ಕುರಿತ ವ್ಯಾಪಕವಾದ ಚರ್ಚೆಗಳು, ಪ್ರಾತ್ಯಕ್ಷಿಕೆಗಳು ನಡೆಯುತ್ತಿದ್ದವು. ನಾನು ಶಿಬಿರಾರ್ಥಿಯಾಗಿ ಅಲ್ಲಿ ಭಾಗವಹಿಸಿ ಕಲಿತದ್ದು ಬಹಳ. ತುಂಬಾ ಉಪಯುಕ್ತವಾದ ಅಂಥ ಶಿಬಿರ ಮತ್ತೊಮ್ಮೆ ನಡೆಯಬೇಕು.