ನಮ್ಮ ಚಿತ್ರ – ನಿಮ್ಮ ಕವನ!

ಸೃಜನ್ ರವರ ಚಿತ್ರ ಕ್ಕೆ ಕವನ ನಾವು ಕೇಳಿದ್ದು , ಅದಕ್ಕೆ ಬ೦ದ ಪ್ರತಿಕ್ರಿಯೆ ನಾವು ಊಹಿಸದ್ದು!!

ಈ ಪ್ರಯತ್ನ ಹೊಸ ಕವನಗಳ ಜೊತೆ ಕೊಸ ಕವಿಗಳಿಗೂ ಸ್ಪೂರ್ತಿಯಾದರೆ ನಮ್ಮ ಪ್ರಯತ್ನ ಸಾರ್ಥಕ!

ಮೊದಲ ಕವನ ಇ೦ದು ನಿಮ್ಮ ಮು೦ದೆ, ಇನ್ನು ನೀವು೦ಟು, ಈ ರೇಖಾ ಕವನ ಉ೦ಟು!!

ನಿರೀಕ್ಷೆ

– ಸಾವಿತ್ರಿ.ವೆಂ.ಹಟ್ಟಿ(ಲಕ್ಕುಂಡಿ)

ಅವನು ದಾರಿಯ ತಿರುವಿನಲ್ಲಿ

ಸರಿದು ಹೋದ ನೆನಪು ಇನ್ನೂ

ಹಾಗೇ ಇದೆ, ಕತ್ತಲೆ ಉಳಿಸಿ

ಹೋದನೇ ಎಂದು ಕುಸಿದು

ಕುಳಿತವಳಿಗೆ ಕಾಣಿಸಿದ್ದು

ಕಾರ್ಮೋಡದೊಡಲಲ್ಲಿ ಬೆಳ್ಳಿ ಚಂದಿರ!

ಬಿರುಮುಡಿಯ ಬಿಟ್ಟು ನಿರೀಕ್ಷಿಸುತ್ತಿರುವುದು

ಬೆನ್ನು ತಿರುವಿ ಹೋದವನಿಗಲ್ಲ, ಆದರೆ

ಅವನೆ ಬಿತ್ತಿ ಹೋಗಿರುವ ಬೆಳಕ ಬೀಜ

ಚಿಗುರುವುದಕ್ಕಾಗಿ ನಿರೀಕ್ಷಿಸದೇ ಇರಲ್ಹೇಗೆ?!

ಆಸೆ, ಮಮತೆಯ ನೀರೆರೆದು

ಕಾಯುತ್ತಿದ್ದೇನೆ ಬಾಲ ಚಂದಿರಗಾಗಿ!!

]]>

‍ಲೇಖಕರು G

May 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: