ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನಮ್ಮಮ್ಮ ಅಂದ್ರೆ ನಂಗಿಷ್ಟ’ ತೆಲುಗಿನಲ್ಲಿ

ವಸುಧೇಂದ್ರ

ನನ್ನ ಪ್ರಬಂಧ ಸಂಕಲನ ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಈಗ ತೆಲುಗಿನಲ್ಲಿ ಪ್ರಕಟವಾಗುತ್ತಿದೆ. ಬಳ್ಳಾರಿಯವಳಾದ ನನ್ನಮ್ಮ, ಯಾವತ್ತೂ ತೆಲುಗು ಪುಸ್ತಕಗಳನ್ನು ಇಷ್ಟ ಪಟ್ಟು ಓದುತ್ತಿದ್ದಳು. ಆ ಕಾರಣದಿಂದಾಗಿ ಇದು ನನಗೆ ಸಂಭ್ರಮದ ಸಂಗತಿಯಾಗಿದೆ.

ನನ್ನ ’ಮೋಹನಸ್ವಾಮಿ’ ಕೃತಿಯನ್ನು ತೆಲುಗು ಓದುಗರು ತುಂಬು ಹೃದಯದಿಂದ ತಮ್ಮದಾಗಿಸಿಕೊಂಡಿದ್ದಾರೆ. ಆದ್ದರಿಂದ ಈ ಹೊಸ ಕೃತಿಯ ಅನುವಾದ ನನ್ನಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿವೆ. ಕನ್ನಡದ ಮುಖಪುಟವನ್ನೇ ತೆಲುಗಿನಲ್ಲಿಯೂ ಬಳಿಸಿದ್ದಾರೆ. ಆದ್ದರಿಂದ ಇದು ಕನ್ನಡ ಮುಖಪುಟ ಅನುವಾದವೂ ಹೌದು! ಅದರ ಕಲಾವಿದೆ ಸೌಮ್ಯ ಕಲ್ಯಾಣಕರ್‌ ಗೆ ಧನ್ಯವಾದಗಳು.

ಈ ಪುಸ್ತಕವನ್ನು ರಂಗನಾಥ ರಾಮಚಂದ್ರ ರಾವ್ ಅನುವಾದಿಸಿದ್ದಾರೆ. ಅವರಿಗೆ ಈ ಹಿಂದೆ ಕುವೆಂಪು ಭಾಷಾ ಭಾರತಿಯ ಬಹುಮಾನವೂ, ಸಾಹಿತ್ಯ ಸಮ್ಮೇಳನದ ಗೌರವವೂ ದಕ್ಕಿವೆ. ಅವರ ಕನ್ನಡ ಪ್ರೀತಿ ಅನನ್ಯವಾದದ್ದು. ಗೆಳೆಯರಾದ ಮೋಹನ್‌ ಬಾಬು ಅವರು ಈ ಕೃತಿಯನ್ನು ತಮ್ಮ ಛಾಯಾ ಪಬ್ಲಿಕೇಷನ್ಸ್‌ ಮೂಲಕ ಪ್ರಕಟಿಸುತ್ತಿದ್ದಾರೆ. ಎಲ್ಲರಿಗೂ ನಾನು ಆಭಾರಿ.

‍ಲೇಖಕರು Avadhi

8 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading